ಪಂಜದಲ್ಲಿ ಶ್ರೀ ಗಣೇಶ್ ಟ್ರೇಡರ್ಸ್ ಶುಭಾರಂಭ

0

ಅಡ್ಡಬೈಲು ಬಾಲಕೃಷ್ಣ ಮಣಿಯಾಣಿ ಮಾಲಕತ್ವದ ಪಂಜ ಸೌಧಾಮಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಗಣೇಶ್ ಟ್ರೇಡರ್ಸ್ ದಿನಸಿ ಹಾಗೂ ಪೂಜಾ ಸಾಮಾಗ್ರಿಗಳ ಮಳಿಗೆ ಆ.24ರಂದು ಪಂಜ ಹಾಲು ಸೊಸೈಟಿ ಬಳಿ ಇರುವ ಐಶ್ವರ್ಯ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು, ಬೇಬಿ ಇಶಾನ್ವಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿಡಾ.ದೇವಿಪ್ರಸಾದ್ ಕಾನತ್ತೂರು, ಕಟ್ಟಡದ ಮಾಲಕ ಯೋಗೀಶ್ ,ಶ್ರೀಮತಿ ಮೀನಾಕ್ಷಿ, ಶ್ರೀಮತಿ ಸುಶೀಲ,ಶ್ರೀಮತಿ ಸ್ವಾತಿ, ವೈಶಾಖ ಹೆಗ್ಡೆ, ಉಷಾ ಎಸ್.ಹೆಗ್ಡೆ,ಪರಮೇಶ್ವರ,ಲೋಕನಾಥ ನಾಯರ್ ಕೆರೆ , ಕೃಷ್ಣ ಪಡೀಲ್, ನಾರಾಯಣ ಮಂಗಳೂರು,ಪುಷ್ಪಾ ಕುರಿಂಜ,ಸುದ್ದಿ ಬಿಡುಗಡೆ ವರದಿಗಾರ ಕೃಷ್ಣ ಬೆಟ್ಟ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಬಾಲಕೃಷ್ಣ ಮಣಿಯಾಣಿ ಸ್ವಾಗತಿಸಿ,ವಂದಿಸಿದರು.ಬೆಳಿಗ್ಗೆ ಗಣಪತಿ ಹವನ ನಡೆಯಿತು.