ಬೆಳ್ಳಾರೆ ಅಂಗನವಾಡಿಗೆ ಮಿಕ್ಸಿ ಕೊಡುಗೆ

0

ಶಹೀದ್ ಭಗತ್ ಸಿಂಗ್ ಯುವಸೇನೆ ಮಾಸ್ತಿಕಟ್ಟೆ ಬೆಳ್ಳಾರೆ ಗೌರವಾಧ್ಯಕ್ಷರಾದ ಆರ್. ಕೆ ಭಟ್ ಕುರುಂಬುಡೇಲುರವರು ಬೆಳ್ಳಾರೆ ಅಂಗನವಾಡಿಗೆ ಮಿಕ್ಸಿಯನ್ನು ಆಗಸ್ಟ್ 23ರಂದು ಕೊಡುಗೆಯಾಗಿ ನೀಡಿದರು.

ಇವರ ಶ್ರೀಮತಿಯವರಾದ ಸ್ವಾತಿ ಆರ್ .ಕೆ ಭಟ್ ರವರು ಶಾಲಾ ಪುಟಾಣಿಗಳಿಗೆ ಚಾಕಲೇಟ್ ನೀಡಿದರು. ಈ ಸಂದರ್ಭದಲ್ಲಿ ಭಗತ್ ಸಿಂಗ್ ಯುವಸೇನೆ ಅಧ್ಯಕ್ಷರಾದ ಲೋಹಿತ್ ರೈ ಶಾಲಾ ಪುಟಾಣಿಗಳು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.