ಆಲೆಟ್ಟಿ: ಕಣಕ್ಕೂರು ತ್ರಿವೇಣಿ ಸಂಗಮದ ಬಳಿ ಲಾರಿ ಪಲ್ಟಿ- ಚಾಲಕ ಸಹಿತ ಸಹ ಪ್ರಯಾಣಿಕ ಪಾರು

0

ಆಲೆಟ್ಟಿ ಕೋಲ್ಚಾರು ಬಂದಡ್ಕ ಸಂಪರ್ಕದ ರಸ್ತೆಯಲ್ಲಿ ಕಣಕ್ಕೂರು ತ್ರಿವೇಣಿ ಸಂಗಮದ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಸುಳ್ಯ ಕಡೆಯಿಂದ ಕೇರಳದ ಪಾಲಕ್ಕಾಡ್ ಕಡೆಗೆ ಜೋಳ ಹೇರಿಕೊಂಡು ಹೋಗುತ್ತಿದ್ದ ದೊಡ್ಡ ಗಾತ್ರದ ಲಾರಿ ಕಣಕ್ಕೂರು ತ್ರಿವೇಣಿ ಸಂಗಮದ ಎತ್ತರ ಪ್ರದೇಶದಲ್ಲಿ ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿ ಪಲ್ಟಿಯಾಯಿತು.

ಚಾಲಕ ಹಾಗೂ ಕ್ಲೀನರ್ ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದು ಪ್ರಾಣಾಪಯದಿಂದ ಪಾರಾಗಿದ್ದರೆ.

ಗಾಯಗೊಂಡ ಅವರಿಬ್ಬರನ್ನು ಸ್ಥಳೀಯ ಪಂಚಾಯತ್ ಸದಸ್ಯ ದಿನೇಶ್ ಕಣಕ್ಕೂರು ರವರ ನೇತೃತ್ವದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.