ಏನೆಕಲ್ಲು ಸ.ಹಿ.ಪ್ರಾ. ಶಾಲೆಯಲ್ಲಿ ಲಂಚ ಭ್ರಷ್ಟಾಚಾರ ವಿರೋಧಿ ಮತದಾನ ಜಾಗೃತಿ ಫಲಕ ಅನಾವರಣ

0

ಏನೆಕಲ್ಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಲಂಚ ಭ್ರಷ್ಟಾಚಾರ ವಿರೋಧಿ ಮತದಾನ ಜಾಗೃತಿಯ ಪ್ರತಿಜ್ಞೆ ಹಾಗೂ ಫಲಕ ಅನಾವರಣ ಕಾರ್ಯಕ್ರಮ ಆ.24 ರಂದು ನಡೆಯಿತು.

ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಲಂಚ ಭ್ರಷ್ಟಾಚಾರ ವಿರುದ್ದದ ಮತದಾನ ಜಾಗೃತಿ ಪ್ರತಿಜ್ಞೆ ಭೋದಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ್ ಕುಮಾರ್ ಅಂಬೆಕಲ್ಲು ಮಾತನಾಡಿ ಶುಭ ಹಾರೈಸಿದರು. ಬಳಿಕ ಶಾಲಾ ಗೋಡೆಯಲ್ಲಿ ಫಲಕ ಆನಾವರಣಾಗೊಳಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಚಂದ್ರಿಕಾ, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ವರದಿಗಾರ ಈಶ್ವರ್ ವಾರಣಾಸಿ, ಕುಶಾಂತ್ ಕೊರತ್ಯಡ್ಕ, ಶಾಲಾ ಶಿಕ್ಷಕ ವರ್ಗದವರು, ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.