ಕೊರಂಬಡ್ಕ ದೈವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ : ಸನ್ಮಾನ

0


ಸುಳ್ಯ ಜಯನಗರ ಕೊರಬಡ್ಕ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ, ಶ್ರೀ ಗುಳಿಗದೈವ,ಶ್ರೀ ಕೊರಗಜ್ಜ ದೈವಸ್ಥಾನ, ವ್ಯವಸ್ಥಾನಪನಾ ಆಡಳಿತ ಸೇವಾಸಮಿತಿ ಟ್ರಸ್ಟ್ ಇದರ ಆಶ್ರಯದಲ್ಲಿ ೨ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ದೈವಸ್ಥಾನದ ವಠಾರದಲ್ಲಿ ನಡೆಯಿತು.


ಉದ್ಘಾಟನೆ : ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಕೊರಂಬಡ್ಕ ಉದ್ಘಾಟಿಸಿದರು. ನ.ಪಂ. ಸದಸ್ಯೆ ಶಿಲ್ಪಾ ಸುದೇವ್, ಆಡಳಿತ ಸಮಿತಿ ಕಾರ್ಯದರ್ಶಿ ಸುಂದರ ಕುದ್ಪಾಜೆ, ಜೊತೆ ಕಾರ್ಯದರ್ಶಿ ಶಶಿಧರ ಕುದ್ಪಾಜೆ, ಕೋಶಾಧಿಕಾರಿ ರಮೇಶ್ ಕೊಡೆಂಕಿರಿ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ, ದೈವಸ್ಥಾನದ ಪಾತ್ರಿ ಬಾಬು ಕೆ.ಪಿ.ಇದ್ದರು. ಬಳಿಕ ಕೃಷ್ಣವೇಷ ಸ್ಪರ್ಧೆ ಸಹಿತ ವಿವಿಧ ಸ್ಫರ್ಧಾ ಕಾರ್ಯಕ್ರಮಗಳು ನಡೆದವು.


ಸಮಾರೋಪ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಹಾಗೂ ಸನ್ಮಾನ ನಡೆಯಿತು. ವ್ಯವಸ್ಥಾಪನಾ ಆಡಳಿತ ಸಮಿತಿ ಅಧ್ಯಕ್ಷ ಕೇಶವ ಸಿ.ಎ.ಅಧ್ಯಕ್ಷತೆ ವಹಿಸಿದ್ದರು. ನ.ಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿ, ಊರ ಹಿರಿಯರಾದ ರಾಧಾಕೃಷ್ಣ ನಾಯಕ್, ವ್ಯವಸ್ಥಾಪನಾ ಆಡಳಿತ ಸಮಿತಿಯ ಸಂಚಾಲಕ ಜಿ. ಜಗನ್ನಾಥ ವೇದಿಕೆಯಲ್ಲಿದ್ದರು.ನಿವೃತ್ತ ಯೋಧ ಲೋಕೇಶ್ ಇರಂತಮಜಲುರನ್ನು ಸನ್ಮಾನಿಸಲಾಯಿತು.ಬಹುಮಾನ ವಿತರಣೆ ನಡೆಯಿತು. ಜಗನ್ನಾಥ ಜಯನಗರ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಜನಾರ್ಧನ ಜಯನಗರ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.