p>

ಅರಂತೋಡು : ಗಲ್ಫ್ ಸಹೋದರರಿಗೆ ಸ್ನೇಹಕೂಟ

0


ಅರಂತೋಡು ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ವತಿಯಿಂದ ಗಲ್ಫ್ ನಲ್ಲಿ ಉಧ್ಯೋಗದಲ್ಲಿರುವ ಅರಂತೋಡು ಜಮಾತ್ ನ ದುಬೈ ಸಮಿತಿ ಸದಸ್ಯರುಗಳಾದ ಸೈಫುದ್ಧೀನ್ ಪಠೇಲ್, ರಹೀಂ ಅರಂತೋಡು, ಕೆ.ಎಂ ಅನ್ವಾರ್, ಸಿನಾನ್ ಕುನ್ನಿಲ್ ರವರಿಗೆ ಸ್ನೇಹ ಕೂಟ ಕಾರ್ಯಕ್ರಮವು ಸೆ.13 ರಂದು ನಡೆಯಿತು.
ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ದುವಾ ನೆರವೇರಿಸಿದ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಇಸಾಕ್ ಬಾಖವಿ ಹಾಗು ದುಬೈ ಸಮಿತಿಯ ಗೌರವಾಧ್ಯಕ್ಷ ಹಾಜಿ ಬದುರುದ್ಧೀನ್ ಪಠೇಲ್ ಶುಭ ಹಾರೈಸಿದರು.


ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮೊಹಮ್ಮದ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ, ಎ.ಹನೀಫ್, ಮೊಯಿದು ಕುಕ್ಕುಂಬಳ, ಮುಜೀಬ್, ಹಾಜಿ ಅಝಾರುದ್ಧೀನ್, ಜುಬೈರ್ ಎಸ್.ಇ ಮುಝಮ್ಮಿಲ್ ಕುಕ್ಕುಂಬಳ ಎ.ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಎಂ ಮೂಸಾನ್ ಸ್ವಾಗತಿಸಿ ನಿರೂಪಿಸಿದರು.