ಮನೆಯಲ್ಲಿ ಜಗಳ : ನದಿಗೆ ಹಾರಲೆಂದು ಬಂದ ಮಹಿಳೆ

0

ಪೋಲೀಸರಿಂದ ಬುದ್ದಿವಾದ – ಠಾಣೆಗೆ ಕರೆದೊಯ್ದು ವಿಚಾರಣೆ

ಗಂಡ ಮನೆಯಲ್ಲಿ ಜಗಳ ಮಾಡುತ್ತಾನೆಂಬ ಕಾರಣಕ್ಕೆ ಮಹಿಳೆಯೊಬ್ಬರು ಕೋಪಗೊಂಡು ನದಿಗೆ ಹಾರಲೆಂದು ಕಾಂತಮಂಗಲ ಸೇತುವೆ ಬಳಿ ಬಂದು ಅಳುತ್ತಿರುವುದನ್ನು ಕಂಡ ಸ್ಥಳೀಯರು ಪೋಲೀಸರಿಗೆ ತಿಳಿಸಿದ್ದು, ಪೋಲೀಸರು ಸ್ಥಳಕ್ಕೆ ಬಂದು ಆ ಮಹಿಳೆಗೆ ಬುದ್ದಿವಾದ ಹೇಳಿದ ಘಟನೆ ವರದಿಯಾಗಿದೆ.

ಕಾಂತಮಂಗದಲ್ಲಿ ಬಾಡಿಗೆ ಕೊಠಡಿಯಲ್ಲಿರುವ ಗಂಡ – ಹೆಂಡತಿ ಮಧ್ಯೆ ಜಗಳವಾಗಿತ್ತು. ಗಂಡನ ಮೇಲೆ ಸಿಟ್ಟಾದ ಪತ್ನಿ ಕಾಂತಮಂಗಲ ನದಿ ಬದಿಗೆ ಬಂದು ಕುಳಿತು ಅಳುತ್ತಿದ್ದರೆಂದೂ, ಸ್ಥಳೀಯರು ಆ ಮಹಿಳೆಯನ್ನು ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೆನ್ನಲಾಗಿದೆ. ಸ್ಥಳೀಯರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದರು. ಪೋಲೀಸರು ಸ್ಥಳಕ್ಕೆ ಬಂದು ಆ ಮಹಿಳೆಗೆ ಬುದ್ದಿ ಹೇಳಿ, ಬಳಿಕ ಪೋಲೀಸ್ ಠಾಣೆಗೆ ಕರೆದುಕೊಂಡು ಬಂದರೆಂದು, ಇದೀಗ ಠಾಣೆಯಲ್ಲಿವಿಚಾರಣೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.