ಎನ್.ಎಂ.ಸಿ : ಸ್ವಚ್ಛತಾ ಪಕ್ವಾಡ ಜಾಗೃತಿ ಕಾರ್ಯಕ್ರಮ

0

ನೆಹರು ಮೆಮೋರಿಯಲ್ ಕಾಲೇಜು ರೋವರ್ ಮತ್ತು ರೇಂಜರ್ ವಿಭಾಗದ ವತಿಯಿಂದ, ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತಾ ಪಕ್ವಾಡ ಜಾಗೃತಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರುದ್ರ ಕುಮಾರ್ ಎಂ. ಎಂ. ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆ ಹಾಗೂ ಕಸ ವಿಂಗಡಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ರೋವರ್ ಮತ್ತು ರೇಂಜರ್ ಲೀಡರ್ಸ್ ಗಳಾದ ಉಮೇಶ್ ಹಾಗೂ ಶೋಭಾ ಎ. ಉಪಸ್ಥಿತರಿದ್ದರು. ಮಾಹಿತಿ ಕಾರ್ಯಕ್ರಮದ ನಂತರ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕರಪತ್ರಗಳನ್ನು ಹಂಚುವುದರ ಮುಖಾಂತರ ಜಾಥಾವನ್ನು ಕೈಗೊಂಡರು. ಜಾಥಾದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್ ಎಂ.ಎಂ., ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಿ.ಎಚ್. ತಿಪ್ಪೇಸ್ವಾಮಿ, ರೋವರ್ಸ್ ಸ್ಕೌಟ್ ಲೀಡರ್ಸ್, ರೇಂಜರ್ ಲೀಡರ್ಸ್, ಮತ್ತು ಎಲ್ಲಾ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.