ಕೃಷಿ ವಿಶ್ವವಿದ್ಯಾನಿಲಯ ಹೆಬ್ಬಾಳ ಬೆಂಗಳೂರು ಇದರ ವತಿಯಿಂದ ಕೆ.ಎಸ್. ಅಶೋಕ್ ಕುಮಾರ್ ಕರಿಕಳರಿಗೆ ಸನ್ಮಾನ

0

ದೊಡ್ಡಬಳ್ಳಾಪುರದ ಹುಸ್ಕೂರಿನಲ್ಲಿ ಕೃಷಿಕ ಮತ್ತು ಉದ್ಯಮಿ ಆಗಿರುವ ಕೆ.ಎಸ್. ‌ಅಶೋಕ್ ಕುಮಾರ್ ಕರಿಕಳರಿಗೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೃಷಿ ವಿಶ್ವವಿದ್ಯಾನಿಲಯದ ಅಲ್ಯುಮ್ನಿ ಅಸೋಸಿಯೇಷನ್ ವತಿಯಿಂದ ‌ಸೆ. 22ರಂದು ಸನ್ಮಾನ ಕಾರ್ಯಕ್ರಮ ನಡೆಯಿತು. ಕೆ.ಎಸ್. ಅಶೋಕ್ ಕುಮಾರರು ದೊಡ್ಡಬಳ್ಳಾಪುರ ಹುಸ್ಕೂರಿನಲ್ಲಿ ನೂರಾರು ಹೆಕ್ಟೇರ್ ಭೂಮಿಯಲ್ಲಿ ವೈವಿಧ್ಯಮಯ ಕೃಷಿಯನ್ನು ಮಾಡಿಕೊಂಡು ಬಂದಿರುವುಸಲ್ಲದೆ, ಕುಕ್ಕುಟೋದ್ಯಮವನ್ನೂ ನಡೆಸಿಕೊಂಡು ಬರುತ್ತಿದ್ದು ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ. ಪ್ರತಿಭಾನ್ವಿತ ಅಲ್ಯುಮ್ನಿ ಸದಸ್ಯರು ಎಂಬ ನೆಲೆಯಲ್ಲಿ ವಿಶ್ವವಿದ್ಯಾನಿಲಯ ಇವರನ್ನು ಸನ್ಮಾನಿಸಿ ಗೌರವಿಸಿದೆ. ಕರ್ನಾಟಕ ಸರಕಾರದ ಕೃಷಿ ಸಚಿವ ಚೆಲುವರಾಯ ಸ್ವಾಮಿ ಸನ್ಮಾನ ನೆರವೇರಿಸಿ ಶುಭ ಹಾರೈಸಿದರು.