ಐವರ್ನಾಡು – ದೇರಾಜೆ ರಸ್ತೆ ಸಂಪೂರ್ಣ ಹೊಂಡ ಗುಂಡಿ

0

ಚುನಾವಣಾ ಬಹಿಷ್ಕಾರ, ಪ್ರತಿಭಟನೆ ಎಚ್ಚರಿಕೆಯ – ಬ್ಯಾನರ್ ಪ್ರತ್ಯಕ್ಷ

ಐವರ್ನಾಡು ದೇರಾಜೆ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ದಿನನಿತ್ಯವೂ ಹಲವಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು , ಶಾಲಾ ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೂ ತೊಂದರೆಯಾಗಿದೆ.ದೇರಾಜೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಕೂಡ ಇಲ್ಲದೆ ಇದ್ದು ಜನರಿಗೆ ಸಮಸ್ಯೆಯಾಗಿದೆ.
ರಸ್ತೆ ದುರಸ್ಥಿ ಬಗ್ಗೆ ಜನಪ್ರತಿನಿಧಿಗಳಿಗೆ,ಇಲಾಖಾಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಸ್ಪಂದನವಿಲ್ಲದೆ ಇರುವುದರಿಂದ ನಾಗರಿಕ ಸೇವಾ ಸಮಿತಿ ದೇರಾಜೆಯವರು ಚುನಾವಣಾ ಬಹಿಷ್ಕಾರ ಮತ್ತು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿ ಬ್ಯಾನರ್ ಅಳವಡಿಸಿದ್ದಾರೆ.