ಸೆ. 28 ವಿಶ್ವ ರೇಬೀಸ್ ದಿನ

0

ರೇಬಿಸ್ ಇಷ್ಟು ಮಾರಣಾಂತಿಕ ರೋಗ ಎಂದು ತಿಳಿದಿದೆಯಾ…??

ವರ್ಷಕ್ಕೆ ರೇಬಿಸ್ ಎಷ್ಟು ಜನರನ್ನು ಬಲಿ ಪಡೆದುಕೊಳ್ಳುತ್ತದೆ ಎಂದು ತಿಳಿದಿದೆಯಾ…??

ಸೆಪ್ಟೆಂಬರ್ 28 ರಂದು, ಎನ್‌ಜಿಒಗಳು, ಸರ್ಕಾರಗಳು ಮತ್ತು ಪ್ರಪಂಚದಾದ್ಯಂತದ ಜನರು ವಿಶ್ವ ರೇಬೀಸ್ ದಿನದಂದು ರೋಗದ ಅಪಾಯಗಳ ಬಗ್ಗೆ ಮತ್ತು ಅದನ್ನು ಹೇಗೆ ತಡೆಯಬಹುದು ಎಂಬುದರ ಕುರಿತು ಜಾಗೃತಿ ಮೂಡಿಸಲು ಒಗ್ಗೂಡುತ್ತಾರೆ. ಗ್ಲೋಬಲ್ ಅಲೈಯನ್ಸ್ ಫಾರ್ ರೇಬೀಸ್ ಕಂಟ್ರೋಲ್ (ಜಿಎಆರ್‌ಸಿ) ಆಯೋಜಿಸಿರುವ ಈವೆಂಟ್, ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ಜನರು ಮತ್ತು ಸಾಕುಪ್ರಾಣಿಗಳಲ್ಲಿ ರೇಬೀಸ್ ಅನ್ನು ಹೇಗೆ ನಿರ್ಮೂಲನೆ ಮಾಡಬಹುದು ಎಂಬುದರ ಕುರಿತು ಸಾರ್ವಜನಿಕರಿಗೆ ತಿಳಿಸಲು ಪ್ರಯತ್ನಿಸುತ್ತದೆ. ಪ್ರಪಂಚದಾದ್ಯಂತ, ನಾಯಿಗಳು ರೇಬೀಸ್‌ನಿಂದ ಪ್ರಭಾವಿತವಾಗಿರುವ ಅತ್ಯಂತ ಸಾಮಾನ್ಯ ಪ್ರಾಣಿಗಳಾಗಿವೆ, 99 ಪ್ರತಿಶತಕ್ಕಿಂತ ಹೆಚ್ಚು ಮಾನವ ಪ್ರಕರಣಗಳು ನಾಯಿ ಕಡಿತದಿಂದ ಬರುತ್ತವೆ. GARC ಈವೆಂಟ್ ಅನ್ನು ಪ್ರಾಯೋಜಿಸುತ್ತದೆ ಕೇವಲ ಒಂದು ದಿನಕ್ಕೆ ಜಾಗೃತಿ ಮೂಡಿಸಲು, ಆದರೆ ಸಮುದಾಯಗಳು ವರ್ಷಪೂರ್ತಿ ರೇಬೀಸ್ ಹರಡುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಕ್ರಮಗಳನ್ನು ಇರಿಸಬಹುದು ಎಂಬ ಭರವಸೆಯೊಂದಿಗೆ.

ರೇಬಿಸ್‌ಗೆ ಮೊದಲು ಲಸಿಕೆ ಕಂಡುಹಿಡಿದ ಲೂಯಿ ಪಾಶ್ಚರ್‌ ಮರಣ ಹೊಂದಿದ ದಿನವನ್ನು 2007ರಿಂದ ವಿಶ್ವ ರೇಬಿಸ್‌ ದಿನವೆಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ರೇಬಿಸ್‌ ಕುರಿತು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮೂಲ ಆಶಯ. ಶ್ವಾನಗಳಿಂದ ಮನುಷ್ಯನಿಗೆ ರೇಬಿಸ್‌ ಹರಡುವುದನ್ನು 2030ರ ಒಳಗೆ ತಡೆಯುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ರೇಬಿಸ್‌ ಅನ್ನುವುದು ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆ. ವಿಶೇಷವಾಗಿ ಶ್ವಾನಗಳಿಂದ (ಕಡಿತ ಅಥವಾ ಲಾಲಾರಸದ ಸಂಪರ್ಕದಿಂದ) ಮನುಷ್ಯನಿಗೆ ಹರಡುತ್ತದೆ. ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಮಿದುಳಿಗೆ ಘಾಸಿಯಾಗಿ ಸಾವು ಸಂಭವಿಸುತ್ತವೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಗುಣಪಡಿಸಬಹುದಾದ ಕಾಯಿಲೆ ಎನ್ನುವುದು ತಜ್ಞರ ಅಭಿಮತ.

ವಿಶ್ವ ರೇಬಿಸ್‌ ದಿನವು ಜಗತ್ತಿನ ಅತ್ಯಂತ ದೊಡ್ಡ ಜಾಗೃತಿ ಕಾರ್ಯಕ್ರಮವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮುಂದಾಳತ್ವದಲ್ಲಿ ಪ್ರತಿವರ್ಷ ಏಪ್ರಿಲ್‌ನಿಂದಲೇ ಇದರ ಸಿದ್ಧತೆ ಆರಂಭವಾಗುತ್ತದೆ. ಆ ವರ್ಷದ ಘೋಷವಾಕ್ಯ (ಥೀಮ್‌)ವನ್ನು ರೂಪಿಸುವುದರೊಂದಿಗೆ ಸಿದ್ಧತೆಗೆ ಚಾಲನೆ ಸಿಗುತ್ತದೆ. ”ರೇಬಿಸ್‌ ಕೊನೆಗಾಣಿಸಿ: ಸಹಯೋಗ ನೀಡಿ, ಲಸಿಕೆ ಹಾಕಿಸಿಕೊಳ್ಳಿ” ಎನ್ನುವುದು ಈ ವರ್ಷದ ಧ್ಯೇಯವಾಕ್ಯವಾಗಿದೆ.

ಪ್ರತಿ ವರ್ಷ ಜಗತ್ತಿನಲ್ಲಿ ರೇಬಿಸ್‌ನಿಂದ ಸಂಭವಿಸುವ ಮರಣ. ಅದರಲ್ಲಿ ಶೇ.90ರಷ್ಟು ಸಾವುಗಳು ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ವರದಿಯಾಗುತ್ತಿವೆ.

ಸಾವು ಪ್ರತಿವರ್ಷ ಭಾರತದಲ್ಲಿ ರೇಬಿಸ್‌ನಿಂದ ಸಂಭವಿಸುತ್ತದೆ ಎಂದು ಕೇಂದ್ರ ಸರಕಾರವೇ ಹೇಳಿಕೊಂಡಿದೆ. ಅಂಡಮಾನ್‌-ನಿಕೋಬಾರ್‌, ಲಕ್ಷದ್ವೀಪದಲ್ಲಿ ಮಾತ್ರ ಯಾವುದೇ ರೇಬಿಸ್‌ ಸಾವು ಘಟಿಸುತ್ತಿಲ್ಲ!

ರೇಬಿಸ್‌ನಿಂದ ಸಾವಿಗೀಡಾಗುವ ಮಕ್ಕಳಲ್ಲಿ ಹೆಚ್ಚಿನವರು 5ರಿಂದ 13 ವರ್ಷದೊಳಗಿನ ಮಕ್ಕಳು. ಶ್ವಾನಗಳ ಜತೆ ಆಟವಾಡುವುದು, ಅವುಗಳ ವರ್ತನೆ ಗೊತ್ತಿಲ್ಲದೇ ಕೆಣಕಲು ಹೋಗಿ ಕಚ್ಚಿಸಿಕೊಳ್ಳುವುದು ಮುಖ್ಯ ಕಾರಣ. ಹೀಗಾಗಿ ಶ್ವಾನಗಳ ವರ್ತನೆ ಮತ್ತು ಆಂಗಿಕ ಭಾಷೆ (ಸಿಟ್ಟು, ಹತಾಶೆ, ಸ್ನೇಹದ ವರ್ತನೆ) ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ರೇಬಿಸ್‌ ಕುರಿತು ಅರಿವು ಮೂಡಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ರಾಷ್ಟ್ರೀಯ ರೇಬಿಸ್‌ ನಿಯಂತ್ರಣ ಯೋಜನೆ’ ರೂಪಿಸಿದೆ.