ಕಲ್ಲೇರಿ : ವಿಶ್ವ ಬಂಟರ ಸಂಘದ ವತಿಯಿಂದ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ

0

ವಿಶ್ವ ಬಂಟ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿ ವತಿಯಿಂದ ಅ.3 ರಂದು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಕಲ್ಲೇರಿ ಶ್ರೀಮತಿ ಶೋಭಾ ಶ್ರೀನಿವಾಸ ರೈ ಅವರ ಪುತ್ರಿ ಅನುಷ ರೈ ಅವರ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯದ ಚೆಕ್ ವಿತರಣೆ ಮಾಡಿದರು.


ಮಂಗಳೂರು ಜಾಗತಿಕ ಬಂಟರ ಸಂಘದ ಸುಳ್ಯ ಪ್ರತಿನಿಧಿ ಕುಂಬ್ರ ದಯಕರ ಆಳ್ವರವರು ಚೆಕ್ ವಿತರಣೆ ಮಾಡಿ ಅತಿ ಬಡವರನ್ನು ಗುರುತಿಸಿ ಶಿಕ್ಷಣ ನೀಡುವ ಸಲುವಾಗಿ ಧನಸಹಾಯ ನೀಡಿ ಪ್ರೋತ್ಸಾಹ ನೀಡುವುದಲ್ಲದೆ, ಇನ್ನೂ ಉನ್ನತ ವ್ಯಾಸಂಗ ಮಾಡಲಿ ಎಂದು ಹೇಳಿದರು. ಚೆಕ್ ಪಡೆದುಕೊಂಡ ಕುಟುಂಬಸ್ಥರು ಐಕಳ ಹರೀಶ್ ರೈಯವರಿಗೆ ಕೃತಜ್ಞತೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಎನ್‌.ಜಿ. ಪ್ರಭಾಕರ ರೈ ಎಣ್ಮೂರು, ಬಂಟರ ಸಂಘ ತಾಲೂಕು ಸಮಿತಿ ಮಾಜಿ ನಿರ್ದೇಶಕಿ ಪುಡ್ಕಜೆ ರಾಜೀವ್ ರೈ ಬೆಳ್ಳಾರೆ, ಪ್ರೀತಂ ರೈ ಬೆಳ್ಳಾರೆ, ಎಡಮಂಗಲ ಗ್ರಾ. ಪಂ. ಸದಸ್ಯ ಮಾಯಿಲಪ್ಪ ಗೌಡ ಎಣ್ಮೂರು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಪೂರ್, ಭಾಗೀರಥಿ ರೈ, ಶುಭಾ ಹರೀಶ್ ರೈ ಉಪಸ್ಥಿತರಿದ್ದರು.
ಅಬ್ದುಲ್ ಗಪೂರ್ ಪ್ರಸ್ತಾವನೆಗೈದು, ವಂದಿಸಿದರು.