ಬಸ್ ನಿರ್ವಾಹಕನಿಂದ ರಿಕ್ಷಾ ಚಾಲಕನ ಮೇಲೆ ಹಲ್ಲೆ

0

ಠಾಣೆ ಎದುರು ಜಮಾಯಿಸಿದ ರಿಕ್ಷಾ ಚಾಲಕರು



ಸುಳ್ಯದಿಂದ ಮಂಡೆಕೋಲಿಗೆ ಹೋಗುವ ಖಾಸಗಿ ಬಸ್‌ನ ನಿರ್ವಾಹಕರೊಬ್ಬರು ರಿಕ್ಷಾ ಚಾಲಕರೊಬ್ಬರಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದಾರೆಂಬ ಕಾರಣಕ್ಕಾಗಿ ವಿವೇಕಾನಂದ ಸರ್ಕಲ್ ಬಳಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ರಿಕ್ಷಾ ಚಾಲಕರು ಸುಳ್ಯ ಠಾಣೆಯ ಆವರಣದಲ್ಲಿ ಜಮಾಯಿಸಿದ ಘಟನೆ ವರದಿಯಾಗಿದೆ.


ನಿನ್ನೆ ಘಟನೆ ನಡೆದಿದ್ದು, ಪ್ರಸನ್ನ ಎಂಬ ರಿಕ್ಷಾ ಚಾಲಕರಿಗೆ ಹಲ್ಲೆ ನಡೆದಿರುವುದಾಗಿ ದೂರಲಾಗಿದೆ. ಹಲ್ಲೆ ನಡೆಸಿದ ಬಸ್ ನಿರ್ವಾಹಕನ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.