ಸುಳ್ಯ: ಅಖಿಲ ಭಾರತ BSNL DOT ಪಿಂಚಣಿದಾರರ ಸಂಘ (AIBDPA)ದ ಮಹಾಸಭೆ

0

ಅಖಿಲ ಭಾರತ BSNL – DOT ಪಿಂಚಣಿದಾರರ ಸಭೆ ಆ. 30 ರಂದು ಸುಳ್ಯದ ಮರಾಟಿ ಸಮಾಜ ಸೇವಾ ಮಂದಿರದ ಮಹಮ್ಮಾಯಿ ಸಭಾಂಗಣದಲ್ಲಿ ಸಂಘದ ದ.ಕ. ಜಿಲ್ಲಾ ಮಾಜಿ‌ ಕಾರ್ಯದರ್ಶಿ ಗೋಪಾಲ ನಾಯ್ಕ್ ದೊಡ್ಡೇರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


AIBDPA ಜಿಲ್ಲಾಧ್ಯಕ್ಷ ವಿ. ಚಂದ್ರಶೇಖರ ನಾಯ್ಕ್, ಕಾರ್ಯದರ್ಶಿ ಬಿ.ಪಿ. ನಾರಾಯಣ, ಕೋಶಾಧಿಕಾರಿ ಬಿ.ಕೆ. ಕೃಷ್ಣ, ಸಂಘಟನಾ ಕಾರ್ಯದರ್ಶಿ ಬಿ. ಕೃಷ್ಣ, ಕುಂದಾಪುರ ಶಾಖಾ ಕಾರ್ಯದರ್ಶಿ ಕುಮಾರ್, ಪುತ್ತೂರಿನ ರಂಗನಾಥ್ ರಾವ್ ಮತ್ತು ಮೋನಪ್ಪ ಪೂಜಾರಿ ಅಭ್ಯಾಗತರಾಗಿ ಭಾಗವಹಿಸಿದ್ದರು. AIBDPA ದ.ಕ. ಜಿಲ್ಲೆ ಮಂಗಳೂರು ಇದರ ಶಾಖೆಯನ್ನು ಸುಳ್ಯದಲ್ಲಿ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ನೌಕರಾದ ಚಂದ್ರಶೇಖರ ನಾಯ್ಕ್, ಕುಂಞಿಕಣ್ಣಣ್ ಮತ್ತು ಗೋಪಾಲ ನಾಯ್ಕ್ ದೊಡ್ಡೇರಿಯವರನ್ನು ಸನ್ಮಾನಿಸಲಾಯಿತು. ಬಳಿಕ ಸುಳ್ಯ ಶಾಖೆಯ ಪದಾಧಿಕಾರಿಗಳು ಆಯ್ಕೆ ನಡೆದು ನೂತನ ಅಧ್ಯಕ್ಷರಾಗಿ ಗೋಪಾಲ ನಾಯ್ಕ್ ದೊಡ್ಡೇರಿ, ಉಪಾಧ್ಯಕ್ಷರಾಗಿ ಸಿ. ಗೋಪಾಲಕೃಷ್ಣ ಭಟ್, ಕಾರ್ಯದರ್ಶಿಯಾಗಿ ಮೋಹನ್ ದೇವರಗುಂಡ, ಉಪ ಕಾರ್ಯದರ್ಶಿಯಾಗಿ ಅಚ್ಚುತ ಕೆ, ಕೋಶಾಧಿಕಾರಿಯಾಗಿ ರಾಮ ಯು ಪೆರುವಾಜೆ ಮತ್ತು ಸಮಿತಿಯ ಸದಸ್ಯರಾಗಿ ಎ.ಕೆ. ಮಣಿಯಾಣಿ ಬೆಳ್ಳಾರೆ, ಕೆ. ಮಥಾಯಿ ಸುಬ್ರಹ್ಮಣ್ಯ, ಶ್ರೀಮತಿ ಶೋಭ ಕೆ ನಾಯ್ಕ್, ನಾರಾಯಣ ಕೇಳತ್ತಾಯ ಸುಳ್ಯ, ಬಾಲಕೃಷ್ಣ ರೈ ಬೆಳ್ಳಾರೆ, ಗೋಪಾಲ ಮಂಡೆಕೋಲು ಮತ್ತು ಲೆಕ್ಕಪರಿಶೋಧಕರಾಗಿ ಕೆ. ಶಿವರಾಯ ಆಯ್ಕೆಯಾದರು. ಶ್ರೀಮತಿ ಶೋಭ ಕೆ. ನಾಯ್ಕ್ ಪ್ರಾರ್ಥಿಸಿದರು. ರಾಮ ಯು ಸ್ವಾಗತಿಸಿ ಗಿರಿಯಪ್ಪ ನಾಯ್ಕ್ ವಂದಿಸಿದರು.