ಸುಳ್ಯದ ತಂಬುರಾಟಿ ಭಗವತೀ ಪ್ರಾದೇಶಿಕ ಸಮಿತಿ ಮಹಾಸಭೆ

0


ಶ್ರೀ ತಂಬುರಾಟಿ ಭಗವತೀ ಪ್ರಾದೇಶಿಕ ಸಮಿತಿ ಸುಳ್ಯ ಹಾಗೂ ಮಹಿಳಾ ಸಮಿತಿ ಸುಳ್ಯ ಇದರ ವಾರ್ಷಿಕ ಮಹಾಸಭೆ ಅ. ೮ ರಂದು ಶಿವಕೃಪ ಕಲಾ ಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರಾದೇಶಿಕ ಸಮಿತಿ ಅಧ್ಯಕ್ಷ ಎ. ರಾಧಾಕೃಷ್ಣ ಪರಿವಾರಕಾನ ವಹಿಸಿದ್ದರು.
ಕುತ್ತಿಕೋಲು ಕ್ಷೇತ್ರ ಸಮಿತಿ ಅಧ್ಯಕ್ಷ ಕುಂಞಿಕಣ್ಣ ಬೇಡಗಂ ಹಾಗೂ ಸಮಿತಿ ನಿರ್ದೇಶಕರುಗಳಾದ ಚಂದ್ರನ್ ಮತ್ತು ಶ್ರೀಮತಿ ಮಾದೇವಿಯವರು ಮುಖ್ಯ ಅತಿಥಿಗಳಾಗಿದ್ದರು. ಮಹಿಳಾ ಸಮಿತಿ ಅಧ್ಯಕ್ಷ ಶ್ರೀಮತಿ ಅಂಬಿಕಾ ಉಪಸ್ಥಿತರಿದ್ದರು.


ಸಭೆಯಲ್ಲಿ ಕೊಡುಗೈ ದಾನಿ ಕುಂಞಿರಾಮನ್ ಶ್ರೀಶೈಲಂ ಅರಂಬೂರು ದಂಪತಿಯನ್ನು, ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ಹಾಗೂ ನಾಟಿ ವೈದ್ಯೆ ಶ್ರೀಮತಿ ಕಾರ್ತ್ಯಾಯಿನಿ ಕಾಯರ್ತೋಡಿಯವರನ್ನು ಸನ್ಮಾನಿಸಲಾಯಿತು.
ಪ್ರಮೋದ್ ಐವರ್ನಾಡು ಸ್ವಾಗತಿಸಿ, ವರದಿ ವಾಚಿಸಿದರು. ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿದರು.