ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಪಂಬೆತ್ತಾಡಿ, ಏನೆಕಲ್ಲಿನಲ್ಲಿ ಅಗರ್ವುಡ್ ಕೃಷಿ ಸಮೀಕ್ಷೆ

0


ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಭಾರತ ಸರಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯದ ಅಧೀನದ ಕೇಂದ್ರ ರಾಷ್ಟ್ರೀಯ ಗಿಡಮೂಲಿಕೆ ವಿಭಾಗದಿಂದ ಅಗರ್ವುಡ್ ಕೃಷಿಯ ಸಸ್ಯಶಾಸ್ತ್ರೀಯ ಸಮೀಕ್ಷೆಯು ಸುಳ್ಯ ತಾಲೂಕಿನ ಪಂಬೆತ್ತಾಡಿ ಹಾಗೂ ಕಡಬ ತಾಲೂಕಿನ ಏನೆಕಲ್ಲಿನಲ್ಲಿ ನಡೆಯಿತು.

ಕೇಂದ್ರ ಸರಕಾರಕ್ಕೆ ಅಗರ್ವುಡ್ ಕೃಷಿ ಬಗ್ಗೆ ವರದಿ ಸಲ್ಲಿಸುವ ಸಲುವಾಗಿ ಸಸ್ಯಶಾಸ್ತ್ರಜ್ಞರು ಹಾಗೂ ಸಮೀಕ್ಷಕರಾದ ಡಾ! ರಂಜಿತ್ ಲಯೋಲ ಎಂ.ಆರ್. ಬೇಟಿ ನೀಡಿ ಪಂಬೆತ್ತಾಡಿ ಗ್ರಾಮದ ಅಗರ್ವುಡ್ ಕೃಷಿಕರಾದ ತೀರ್ಥಾನಂದ ಕೊಡೆಂಕಿರಿ ಹಾಗೂ ಏನೆಕಲ್ಲಿನ ಕಾರ್ಯಪ್ಪ ಗೌಡ ಪುಂಡಿಗದ್ದೆ ರವರಲ್ಲಿ ಸಮೀಕ್ಷೆ ನಡೆಸಿದರು. ಈ ಬೇಟಿಯನ್ನು ವನದುರ್ಗಿ ಅಗರ್ವುಡ್ ಇಂಡಿಯಾ ಲಿಮಿಟೆಡ್ ಆಯೋಜಿಸಿತ್ತು.