ಜಾಲ್ಸೂರು: ಕೆಮನಬಳ್ಳಿ ವ್ಯಕ್ತಿ ನಾಪತ್ತೆ – ಪೊಲೀಸ್ ದೂರು

0

ಜಾಲ್ಸೂರು ಗ್ರಾಮದ ಕೆಮನಬಳ್ಳಿ ನಿವಾಸಿ ಶಂಕರ ಮೇರ ಎಂಬವರು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ.

ಕೆಮನಬಳ್ಳಿ ನಿವಾಸಿಯಾಗಿರುವ ಶಂಕರ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಅವರಿಗೆ ಹಾಗೂ ಪತ್ನಿ ಮಕ್ಕಳೊಂದಿಗೆ ಜಗಳವಾಗಿದ್ದು , ಕಳೆದ ಅ.14ರಂದು ಅಪರಾಹ್ನದಿಂದ ಮನೆಗೆ ಬಾರದೆ ಊರಲ್ಲೂ ಇಲ್ಲದೆ ನಾಪತ್ತೆಯಾಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅವರ ಪುತ್ರ ಗಣೇಶ್ ಅವರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.