ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟಕ್ಕೆ ಚಪ್ಪರ ಮುಹೂರ್ತ

0

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ನ. 17,18,19 ರಂದು ಮೂರು ದಿನಗಳ ಕಾಲ ನಡೆಯಲಿರುವ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟದ ಚಪ್ಪರ ಮುಹೂರ್ತವು ಇಂದು ನೆರವೇರಿತು.

ಸುಳ್ಯ ಪ್ರಭು ಗ್ರೌಂಡ್ ನಲ್ಲಿ ನಡೆಯಲಿರುವ ಪಂದ್ಯಾಟದ ಚಪ್ಪರ ಮುಹೂರ್ತಕ್ಕೆ ಹಿರಿಯರಾದ ಸಂಘದ ಗೌರವಾಧ್ಯಕ್ಷ ಲೋಕನಾಥ್ ಎಸ್.ಪಿ ದೀಪ ಪ್ರಜ್ವಲಿಸಿದರು. ಗುರು ಶಾಮಿಯಾನ ಮಾಲಕ ಜಿ.ಜಿ.ನಾಯಕ್ ತೆಂಗಿನಕಾಯಿ ಒಡೆಯುವ ಮೂಲಕ ಚಪ್ಪರದ ಕೆಲಸಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಕಬಡ್ಡಿ ಪಂದ್ಯಾಟದ ಸಂಘಟನಾ ಸಮಿತಿ ಅಧ್ಯಕ್ಷ ಭಾರತ್ ಶಾಮಿಯಾನ ಮಾಲಕ ಸಂಶುದ್ದೀನ್, ಸಂಘದ ಅಧ್ಯಕ್ಷ ಶಿವಪ್ರಕಾಶ್ ಸುಳ್ಯ, ಮಾಜಿ ಅಧ್ಯಕ್ಷ ಗಿರಿಧರ ಸ್ಕಂಧ, ಪದಾಧಿಕಾರಿಗಳಾದ ರಾಜೇಶ್ ಸುಬ್ರಹ್ಮಣ್ಯ, ಜಿ.ಎ.ಮಹಮ್ಮದ್, ಹರೀಶ್ ರೈ ಉಬರಡ್ಕ, ಗುರುದತ್ ನಾಯಕ್,ವೆಂಕಟ್ರಮಣ ಅರಂತೋಡು, ಹಮೀದ್ ಜನತಾ, ಸುನಿಲ್ ಐವರ್ನಾಡು,ರಜಾಕ್ ಜಿ, ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.