ಸುಳ್ಯ ಜೂನಿಯರ್ ಕಾಲೇಜು ರಸ್ತೆ ಹೊಂಡಮಯ

0

ಹದಗೆಟ್ಟ ರಸ್ತೆಯಲ್ಲಿ ಅನಿವಾರ್ಯ ಸಂಚಾರ

ಸುಳ್ಯ ಜ್ಯೋತಿ ಸರ್ಕಲ್ ನಿಂದ ಜೂನಿಯರ್ ಕಾಲೇಜು ಸಂಪರ್ಕಿಸುವ ರಸ್ತೆಯು ಡಾಮರು ಎದ್ದು ಹೋಗಿ ಹೊಂಡಗುಂಡಿಗಳಿಂದ ಕೂಡಿದೆ.


ಇತ್ತೀಚೆಗೆ ಸ್ವಲ್ಪ ದೂರ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು ಮಧ್ಯದಲ್ಲಿ ಸ್ವಲ್ಪ ದೂರ ಕಾಂಕ್ರಿಟೀಕರಣಗೊಂಡಿಲ್ಲ.ಈ ಮಧ್ಯಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರಿಗೆ ಸಮಸ್ಯೆಯಾಗಿದೆ.ದಿನನಿತ್ಯ ನೂರಾರು ವಾಹನಗಳು,ಶಾಲಾ ಮಕ್ಕಳು ಈ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು ವಿದ್ಯಾರ್ಥಿಗಳು ಹಾಗೂ ಪಾದಾಚಾರಿಗಳಿಗೂ ತೊಂದರೆಯಾಗಿದೆ.


ರಸ್ತೆ ಇಕ್ಕಟ್ಟಾಗಿದ್ದು ವಾಹನಗಳು ಸೈಡ್ ಕೊಡುವಾಗ ನಡೆದುಕೊಂಡು ಹೋಗುವವರಿಗೆ ತೊಂದರೆಯಾಗುತ್ತಿದೆ.ದ್ವಿಚಕ್ರ ವಾಹನದವರು ಗುಂಡಿಗಳನ್ನು ತಪ್ಪಿಸುವಾಗ ಬಿದ್ದು ಗಾಯಗೊಂಡ ಘಟನೆಯೂ ಇತ್ತೀಚೆಗೆ ನಡೆದಿದೆ.


ಆದಷ್ಟು ಬೇಗ ಈ ರಸ್ತೆಯ ದುರಸ್ಥಿ ಕಾರ್ಯ ಅಥವಾ ರಸ್ತೆ ಕಾಂಕ್ರೀಟೀಕರಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ನಗರ ಪಂಚಾಯತ್ ಸದಸ್ಯರು ಇತ್ತ ಗಮನಹರಿಸಬೇಕಾಗಿದೆ.