ಸುಬ್ರಹ್ಮಣ್ಯದಲ್ಲಿ ಪೂರ್ವಿ ಸಾಮಾನ್ಯ ಸೇವಾ ಕೇಂದ್ರ ಆರಂಭ

0

ಸಾರ್ವಜನಿಕರಿಗೆ ಉದ್ಯೋಗ ಸೇವೆ, ಪಾನ್ ಕಾರ್ಡ್, ಪೆನ್ಷನ್, ಕೌಶಲ್ಯ ಸೇವೆ ,ಬ್ಯಾಂಕಿಂಗ್ ಸೇವೆ, ಈ -ಶ್ರಮ, ಎಲ್ ಐ ಸಿ, ವಾಹನ ವಿಮೆ, ಮೊಬೈಲ್ ಹಾಗೂ ಡಿಟಿಎಚ್ ರಿಚಾರ್ಜ್, ಜೆರಾಕ್ಸ್, ಆರ್ ಟಿ ಸಿ, ರೇಷನ್ ಕಾರ್ಡ್, ಆಧಾರ್ ಕಾರ್ಡುಗಳನ್ನು ಕ್ಲಪ್ತ ಸಮಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಲಿರುವ ಗ್ರಾ.ಪಂ ಅಧೀನಕ್ಕೊಳಪಟ್ಟು ಪೂರ್ವಿ ಸಾಮಾನ್ಯ ಸೇವಾ ಕೇಂದ್ರವು ಸುಬ್ರಹ್ಮಣ್ಯದ ಕಾಶಿಕಟ್ಟೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಅ.19 ರಂದು ಉದ್ಘಾಟನೆಗೊಂಡಿತು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಕಲ್ಲಾಜೆ ಸೇವಾ ಕೇಂದ್ರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಚ್.ಎಲ್ ವೆಂಕಟೇಶ್ ಮಾತನಾಡಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟದ ಒಡಂಬಡಿಕೆಯಿಂದ ಸೇವೆ ಸಲ್ಲಿಸಲಿರುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಇದಾಗಿದೆ .ಮಹಿಳೆಯರು ಆರ್ಥಿಕ ಸಬಲೀಕರಣ ಸಿಗಬೇಕೆಂಬ ಉದ್ದೇಶದೊಂದಿಗೆ ಸಾರ್ವಜನಿಕ ರಂಗದಲ್ಲಿ ಅವರ ಸೇವೆ ಎಲ್ಲರಿಗೂ ಸುಲಭವಾಗಿ ಸಿಗುವಂತಾಗಲಿ ಹಾಗೂ ಅವರು ಕೂಡ ಆರ್ಥಿಕವಾಗಿ ಸದೃಢ ವಾಗಲೆಂದು ಶುಭ ಹಾರೈಸಿದರು .ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಸುಜಾತ ಕಾಶಿ ಕಟ್ಟೆ, ಗ್ರಾಮ ಪಂಚಾಯತ್ ಪ್ರಭಾರ ಪಿ. ಡಿ. ಓ .ಮೋನಪ್ಪ, ಪಂಚಾಯತ್ ಸದಸ್ಯರುಗಳು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಸುಳ್ಯದ ಮಹಿಳಾ ಮಂಡಲದ ಮಾಜಿ ಅಧ್ಯಕ್ಷರುಗಳು ಹಾಜರಿದ್ದರು. ಪೂರ್ವಿ ಸೇವಾ ಕೇಂದ್ರದ ಮುಖ್ಯಸ್ಥರಾದ ತ್ರಿವೇಣಿ ದಾಮ್ಲೆ ಅವರು ಕಾರ್ಯಕ್ರಮ ನಿರೂಪಿಸಿ ಸೇವಾ ಕೇಂದ್ರದ ಉದ್ದೇಶಗಳನ್ನು ತಿಳಿಸಿ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಹೇಮಾವತಿ ಧನ್ಯವಾದ ಸಮರ್ಪಿಸಿದರು.