ಗುತ್ತಿಗಾರು: ಸರ್ವಾ ಫಾರ್ಮ್ ಸ್ಥಳಾಂತರ ಗೊಂಡು ಶುಭಾರಂಭ

0

ಕಳೆದ 20 ವರ್ಷಗಳಿಂದ ಗುತ್ತಿಗಾರಿನಲ್ಲಿ ಕಾರ್ಯಾಚರಿಸುತ್ತಿರುವ ಚಂದ್ರಶೇಖರ ಕಂದಡ್ಕ ಅವರ ಸರ್ವಾ ಫಾರ್ಮ್ ಮುತ್ತಪ್ಪೇಶ್ವರ ದೈವಸ್ಥಾನ ಬಳಿಯ ಕಟ್ಟಡಕ್ಕೆ ಸ್ಥಳಾಂತರ ಗೊಂಡು ಮೇ.2 ರಂದು ಶುಭಾರಂಭ ಗೊಂಡಿತು.

ನಿವೃತ್ತ ಶಿಕ್ಷಕ ಗುಡ್ಡಪ್ಪ ಗೌಡ ಕಿನ್ನಿ ಕುಮೇರಿ ದೀಪ ಬೇಳಗಿಸಿ ಉದ್ಘಾಟಿಸಿದರು. ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಚಂದ್ರಶೇಖರ ಅವರ ತಾಯಿ ಕೃಷ್ಣಮ್ಮ ಕೃಷ್ಣಪ್ಪ ಕಂದಡ್ಕ, ಶ್ರೀಮತಿ ಸವಿತಾ ಚಂದ್ರಶೇಖರ್, ಪ್ರಶಾಂತ್ ಜಾಕೆ, ಶ್ರೀಮತಿ ವಿನುತಾ ಪ್ರಶಾಂತ್, ವಿವೇಕಾವಾಣಿ ಕಂದಡ್ಕ, ವೈಶ್ವಿ ಪಿ, ಹಶ್ವಿ.ಪಿ, ಆರ್ನ ಕೆ ಮತ್ತಿತರರು ಉಪಸ್ಥಿತರಿದ್ದರು.


ಸರ್ವಾ ಫಾರ್ಮ್ ನಲ್ಲಿ ಬಾಯ್ಲರ್, ಟೈಸನ್‌, ನಾಟಿ ಕೋಳಿ ಚಿಲ್ಲರೆ ಹಾಗೂ ರಖಂ ದರದಲ್ಲಿ ಲಭ್ಯವಿದ್ದು, ಹಂದಿ ಮಾಂಸ ದೊರೆಯುವುದಾಗಿ ಮಾಲಕರು ತಿಳಿಸಿದ್ದಾರೆ.