ನಾಲ್ಕೂರು: ಕೌದಿ ಕೌಶಲ್ಯದಲ್ಲಿ ಮಾಡಿದ ಉತ್ಪನ್ನಗಳ ಬಗ್ಗೆ ಬ್ಯಾಂಕ್ ಆಫ್ ಬರೋಡ ಮುಖ್ಯಸ್ಥೆ ಶ್ಲಾಘನೆ

0

ಇತ್ತೀಚೆಗೆ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮತ್ತು ವಿಜಯ ಗ್ರಾಮ ಸಮಿತಿ ನಾಲ್ಕೂರು ರವರು ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರಿಗೆ ನಡೆಸಿದ ಕೌದಿ ಕೌಶಲ್ಯ ತರಬೇತಿಯಲ್ಲಿ ತಯಾರಿಸಿದ ಪಿಲ್ಲೋ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರತಿಷ್ಠಾನದ ಮಹಾಸಭೆಯಲ್ಲಿ ಪ್ರದರ್ಶನ ಇಡಲಾಯಿತು.


ಈ ಉತ್ಪನ್ನಗಳ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಬ್ಯಾಂಕ್ ಆಫ್ ಬರೋಡ ಇದರ ಮುಖ್ಯಸ್ಥರಾದ ಆರ್ ಜಯಲಕ್ಷ್ಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಇನ್ನೂ ಹೆಚ್ಚಿನ ತರಬೇತಿಗಳನ್ನು ಗ್ರಾಮದಲ್ಲಿ ಆಯೋಜಿಸುವಂತೆ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಉದಯಕುಮಾರ್ ಡಿ.ಆರ್. , ಕಾರ್ಯದರ್ಶಿ ದಿನೇಶ್ ಹಾಲೆಮಜಲು, ಸದಸ್ಯರಾದ ಶಿವರಾಮ ಗೌಡ ಚಿತ್ತಡ್ಕ ಹಾಗೂ ತರಬೇತಿ ಪಡೆದ ಗಾಯತ್ರಿ ಬಾಲಸುಬ್ರಮಣ್ಯ ಭಟ್ ಕೊಲ್ಲಮೊಗ್ರು, ತಾರಾ ಕೇಶವ ಕಲ್ಮ ಕಾರು, ಜಯಂತಿ ಕೊಂದಾಳ. ಕೊಲ್ಲಮೊಗ್ರು ಸೇರಿದಂತೆ ಮತ್ತಿತ್ತರು ಉಪಸಿತರಿದ್ದರು.