ಕುಕ್ಕುಜಡ್ಕ: ತಾಲೂಕು ಮಟ್ಟದ ಭಜನೋತ್ಸವದ ಪೂರ್ವಭಾವಿ ಸಭೆ

0

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ರಾಮ ದೇವಾಲಯದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಭಜನೋತ್ಸವದ ಪೂರ್ವ ಭಾವಿ ಸಭೆಯು ಕುಕ್ಕುಜಡ್ಕದ ಪಂಚಾಯತ್ ಸಭಾಭವನದಲ್ಲಿ ನ.5 ರಂದು ನಡೆಯಿತು.


ಭಜನೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೋಡ್ತುಗುಳಿ ಅಧ್ಯಕ್ಷತೆ ವಹಿಸಿದ್ದರು.
ನ.26 ರಂದು ಚೊಕ್ಕಾಡಿಯಲ್ಲಿ ತಾಲೂಕು ಮಟ್ಟದ ಭಜನೋತ್ಸವ ನಡೆಯಲಿದ್ದು ಪೂರ್ವ ತಯಾರಿಯ ಕುರಿತು ಅವಲೋಕನ‌ ನಡೆಸಲಾಯಿತು. ಆಮಂತ್ರಣ ಪತ್ರ ಹಂಚುವ ಜವಬ್ದಾರಿ ವಲಯದ ಸಂಚಾಲಕರು ಹಾಗೂ ಮೇಲ್ವಿಚಾರಕರು ನಿರ್ವಹಿಸುವ ಬಗ್ಗೆ ವಹಿಸಿಕೊಡಲಾಯಿತು.
ನ.15 ರಂದು ತಾಲೂಕಿನ ಭಜನಾ ಮಂಡಳಿಗಳ ಸದಸ್ಯರನ್ನು ಸೇರಿಸಿ ಸಭೆ ನಡೆಸುವುದಾಗಿ ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಸತೀಶ್ ಕಲ್ಮಕ್ಕಾರು, ಸಮಿತಿ ಖಜಾಂಜಿ ಮಹೇಶ್ ಮೇರ್ಕಜೆ,ಕಾರ್ಯದರ್ಶಿ ಮೇಲ್ವಿಚಾರಕ ಕೃಷ್ಣಪ್ಪ, ಒಕ್ಕೂಟದ ಅಧ್ಯಕ್ಷ ಪ್ರವೀಣ್ ಕುಮಾರ್, ಶ್ರೀಮತಿ ವೀಣಾ ಹಾಗೂ ಸಮಿತಿಯ ಸಂಚಾಲಕರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.