ಕಲ್ಲುಗುಂಡಿ ಬಾರಿನಲ್ಲಿ ಕುಡಿದು ಯುವಕರಿಂದ ದಾಂದಲೆ

0

ಸುಳ್ಯ ಠಾಣೆಗೆ ಯುವಕರನ್ನು ಕರೆತಂದ ಪೊಲೀಸರು

ಬಾರಿಗೆ ಬಂದ ಯುವಕರ ತಂಡವೊಂದು ಬಾರಿನಲ್ಲಿ ಕಂಠಪೂರ್ತಿ ಕುಡಿದು ದಾಂಧಲೆ ನಡೆಸಿದ ಘಟನೆ ದ‌ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಡಿ.6ರಂದು ಸಂಜೆ ಸಂಭವಿಸಿದೆ.

ಕಲ್ಲುಗುಂಡಿಯ ಸ್ಥಳೀಯ ಓರ್ವ ಯುವಕ ಸೇರಿದಂತೆ ಮಡಿಕೇರಿಯ ಭಾಗಮಂಡಲದ ಕೆಲ ಯುವಕರು ಬಾರ್ ನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ ಗಾಜಿನ ಗ್ಲಾಸುಗಳನ್ನು ಪುಡಿಮಾಡಿ ದಾಂದಲೆ ನಡೆಸಿದ್ದು, ವಿಷಯ ತಿಳಿದ ಕಲ್ಲುಗುಂಡಿ ಪೊಲೀಸ್ ಹೊರಠಾಣೆಯ ಪೊಲೀಸರು ಬಂದು ಯುವಕರ ತಂಡವನ್ನು ವಶಕ್ಕೆ ಪಡೆದಿದ್ದು, ಸದ್ಯ ಸುಳ್ಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.