ಚುನಾವಣೆ ಸಂದರ್ಭ ರಸ್ತೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದವರನ್ನು ಪ್ರಶ್ನಿಸಿ

0

ಅಟೋ ರಿಕ್ಷಾದವರ ಕುರಿತು‌ ನಮಗೆ ಕಾಳಜಿ ಇದೆ : ಆದರೆ ನ.ಪಂ. ವಿರುದ್ಧದ ಪ್ರತಿಭಟನೆ ಅರ್ಥವಿಲ್ಲ

ಅಟೋ ಚಾಲಕರ ಪ್ರತಿಭಟನೆಗೆ ನ.ಪಂ. ಸದಸ್ಯ ಎಂ.ವೆಂಕಪ್ಪ‌ ಗೌಡ ಪ್ರತಿಕ್ರಿಯೆ

ಕಳೆದ ಚುನಾವಣೆ ಸಂದರ್ಭ ಸುಳ್ಯ‌-ಕೊಡಿಯಾಲಬೈಲ್ – ದುಗಲಡ್ಕ ರಸ್ತೆ ಅಭಿವೃದ್ಧಿ ‌ಮಾಡುತ್ತೇವೆ ಎಂದು‌ ಭರವಸೆ ನೀಡಿದವರನ್ನು ಇಂದು ಪ್ರತಿಭಟನೆ ಮಾಡಿದವರು ಪ್ರಶ್ನಿಸಬೇಕು ಹೊರತು ನ.ಪಂ. ವಿರುದ್ದದ ಪ್ರತಿಭಟನೆಗೆ ಅರ್ಥವಿಲ್ಲ ಎಂದು ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಅಟೋ ರಿಕ್ಷಾ ಯೂನಿಯನ್ ವತಿಯಿಂದ ನ.ಪಂ. ಎದುರು ಪ್ರತಿಭಟನೆ ನಡೆದಿರುವುದಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ಅಟೋ ರಿಕ್ಷಾ ಚಾಲಕರ ಕುರಿತು ನಮಗೆ ಕಾಳಜಿ ಇದೆ ಎಂದ ಅವರು, ಇಲ್ಲಿ ಭಾಗೀರಥಿ ಮುರುಳ್ಯ ಅವರು ಶಾಸಕರಾಗಿದ್ದಾರೆ. ಅವರನ್ನು ಪ್ರಶ್ನಿಸಬೇಕಾಗಿದೆ. ಎಂ.ಪಿ. ಚುನಾವಣೆಯಲ್ಲಿ ಮತ ಪಡೆದು ಗೆದ್ದವರಿದ್ದಾರೆ. ಅವರು ಸುಳ್ಯಕ್ಕೆ ಏನು ಕೊಟ್ಟಿದ್ದಾರೆ. ಅವರನ್ನು ಪ್ರಶ್ನಿಸಬೇಕು, ಆ ಜನ ಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ಮಾಡಬೇಕೆ ಹೊರತು ನ.ಪಂ. ಎದುರಿನ ಪ್ರತಿಭಟನೆ ಅರ್ಥವಿಲ್ಲ ಎಂದವರು ಹೇಳಿದ್ದಾರೆ.