ಕನಕಮಜಲು: ಅಂಗಡಿ ಬೀಗ ಮುರಿದು ಕಳ್ಳತನ

0

ಇಬ್ರಾಹಿಂ ಕಾಸಿಂ ಅವರ ಅಂಗಡಿಯಿಂದ ಅಂಗಡಿ ಸಾಮಾಗ್ರಿ ಹಾಗೂ ನಗದು ಕಳವು

ರಾತ್ರಿಯ ವೇಳೆ ಅಂಗಡಿ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಂಗಡಿ ಒಳಗಿದ್ದ ಅಂಗಡಿ ಸಾಮಾಗ್ರಿ ಹಾಗೂ ನಗದು ಹಾಗೂ ಕಾಣಿಕೆ ಹುಂಡಿ ಕಳವುಗೈದು ಪರಾರಿಯಾದ ಘಟನೆ ಕನಕಮಜಲಿನಲ್ಲಿ ಡಿ.29ರಂದು ರಾತ್ರಿ ಸಂಭವಿಸಿದೆ.

ಕನಕಮಜಲಿನ ಮುಖ್ಯರಸ್ತೆಯ ಬಳಿ ಜಂಕ್ಷನ್ ನಲ್ಲಿರುವ ಇಬ್ರಾಹಿಂ ಕಾಸಿಂ ಅವರ ಕೆ.ಎಂ. ಜನರಲ್ ಸ್ಟೋರ್ ಅಂಗಡಿಗೆ ಡಿ.29ರಂದು ರಾತ್ರಿ 2.25ರ ವೇಳೆಗೆ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಂಗಡಿ ಒಳಗಿದ್ದ ನೂರು ರೂ.ಗೂ ಅಧಿಕ ಬೆಲೆಬಾಳುವ ಚಾಕಲೇಟ್ ಗಳು, ಆರು ಸಾವಿರ ಮೌಲ್ಯದ ಸಿಗರೇಟು ಪ್ಯಾಕೇಟುಗಳು, ಅಂಗಡಿಯಲ್ಲಿ ಇರಿಸಿದ್ದ ಕಾಣಿಕೆ ಹುಂಡಿಯಲ್ಲಿದ್ದ ನಗದು, ಹಾಗೂ ಡ್ರಯರಲ್ಲಿದ್ದ ಸುಮಾರು ಒಂದು ಸಾವಿರ ನಗದು ಕಳವುಗೈದು ಪರಾರಿಯಾಗಿದ್ದಾರೆ.

ಕಳವು ದೃಶ್ಯ ಸಮೀಪದ ಭಾರತ್ ಸುಫಾರಿ ಟ್ರೇಡರ್ಸ್ ನಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಳವು ನಡೆಸಿ ಹೋಗುವ ದೃಶ್ಯ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಡಿ.29ರಂದು ರಾತ್ರಿ ಕನಕಮಜಲು ಗ್ರಾಮದಲ್ಲಿ ಸುಣ್ಣಮೂಲೆ ಮಹಮ್ಮದ್ ಅವರ ದಿನಸಿ ಅಂಗಡಿಯ ಬೀಗ ಒಡೆಯಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಜಾಲ್ಸೂರು ಹಾಗೂ ಕನಕಮಜಲು ಪರಿಸರದಲ್ಲಿ ಹೆಚ್ವುತ್ತಿದ್ದು, ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.