ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಸಹಾಯಕ ಕೃಷಿ ನಿರ್ದೇಶಕರ ಭೇಟಿ

0

ಆತ್ಮಹತ್ಯೆ ಮಾಡಿಕೊಂಡ ರೈತ, ಆಲೆಟ್ಟಿ ಗ್ರಾಮದ ಚಳ್ಳಂಗಾರು ಜಗದೀಶ ಗೌಡ ರ ಮನೆಗೆ ಇಂದು ಸುಳ್ಯದ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ರವರು ಭೇಟಿ ನೀಡಿದರು.


ಜಗದೀಶರ ಪತ್ನಿ ಮತ್ತು ಮನೆಯವರನ್ನು ಕಂಡು ಮಾತನಾಡಿದ ಅಧಿಕಾರಿ ಅವರಿಗೆ ಸಾಂತ್ವನ ಹೇಳಿದರು. ಅಡಿಕೆ ಕೃಷಿ ಹಳದಿರೋಗದಿಂದ ನಾಶವಾಗಿರುವ ವಿಚಾರ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ್ದಾದರೂ, ಕೃಷಿ ಇಲಾಖೆಯ ವತಿಯಿಂದ ವರದಿ ಸಲ್ಲಿಸುವುದಾಗಿ ಅವರು ಹೇಳಿದರು.