ಬೆಂಗಳೂರಿನ‌ ಕೊಡಗು ದ.ಕ. ಗೌಡ ಸಮಾಜದ ಸ್ನೇಹ ಮಿಲನ ಶೈಕ್ಷಣಿಕ ಸಾಧನೆಗಾಗಿ ಡಾ.ರಕ್ಷಿತಾ ಟಿ.ಎನ್. ಸಣ್ಣಮನೆಯವರಿಗೆ ಸನ್ಮಾನ

0

ಕೊಡಗು ಮತ್ತು ದ.ಕ. ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ ಲಗ್ಗೆರೆ ಇಲ್ಲಿ ಜ.7ರಂದು ನಡೆದ ಸ್ನೇಹ ಮಿಲನ‌ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ‌ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಡಾ.ರಕ್ಷಿತಾ ಟಿ.ಎನ್. ಸಣ್ಣಮನೆ ಯವರನ್ನು ಸನ್ಮಾನಿಸಲಾಯಿತು.

ಇವರು ಜಾಲ್ಸೂರು ಗ್ರಾಮದ ಆರ್ತಾಜೆ ನಿವಾಸಿ ಮಾಜಿ ಯೋಧ ತಿರುಮಲೇಶ್ವರ ಎನ್. ಸಣ್ಣಮನೆ ಹಾಗೂ ನೆಟ್ಟಾರು ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಳಿನಾಕ್ಷಿ ಎ.ರವರ ಪುತ್ರಿ. ಇವರು ಬೆಂಗಳೂರಿನ ಜಿ.ಕೆ.ವಿ.ಕೆ.ಯುನಿವರ್ಸಿಟಿ ಯಲ್ಲಿ ಉದ್ಯೋಗಿಯಾಗಿದ್ದಾರೆ.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಕೆ.ಎಂ.ಸುಲೋಚನಾ ಧನಂಜಯ ಅಡ್ಪಂಗಾಯ, ಪ್ರಾಂಶಪಾಲ ದಾಮೋದರ ಕಣಜಾಲು ಮತ್ತಿತರ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.