ಕೇರ್ಪಡ ಕೂಡುಕಟ್ಟು ಉಳ್ಳಾಕುಲು ಶಿರಾಡಿ ರಾಜನ್ ದೈವಸ್ಥಾನ ಬೊಳ್ಕಜೆ ಸ್ಥಾನ ಚಾವಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ

0

ಕೇರ್ಪಡ ಕೂಡು ಕಟ್ಟು ಉಳ್ಳಾಕುಲು ಶಿರಾಡಿ ರಾಜನ್ ದೈವಸ್ಥಾನ ಬೊಳ್ಕಜೆ ಸ್ಥಾನ ಚಾವಡಿಯಲ್ಲಿ ಉಳ್ಳಾಕುಲು ಬಿಂಬ ಪುನರ್ ಪ್ರತಿಷ್ಠೆ ಮತ್ತು ಶಿರಾಡಿ ರಾಜನ್ ದೈವದ ಕಡ್ತಲೆ ಪುನಃ ಒಪ್ಪಿಸುವುದು ಹಾಗೂ ದೇವರ ಮಜಲಿನ ದೊಂಪದ ಉತ್ಸವದ ನೂತನ ದೈವದ ಕಟ್ಟೆ ಶುದ್ಧೀಕಲಶದೊಂದಿಗೆ ಉದ್ಘಾಟನೆಗೊಂಡಿತು. ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ, ಬೆಳಿಗ್ಗೆ ಗಣಪತಿ ಹವನ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಿತು.


ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಎಂಜೀರು, ಕಾರ್ಯದರ್ಶಿ ಸಾಯಿ ಪ್ರಸಾದ್, ಬೊಳ್ಳಾಜೆ , ಖಜಾಂಜಿ ಅವಿನಾಶ್ ದೇವರಮಜಲು, ಪದಾಧಿಕಾರಿಗಳು ಊರು ಗೌಡರಾದ ಚೆನ್ನಪ್ಪ ಗೌಡ ಕೇರ್ಪಡ ಭಕ್ತಾದಿಗಳು ಉಪಸ್ಥಿತರಿದ್ದರು.