ಪಂಚಾಯತ್ ಸದಸ್ಯನ ಪ್ರಯತ್ನ : ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ 94ಸಿ ಹಕ್ಕುಪತ್ರ ವಿತರಣೆ

0

ಆಲೆಟ್ಟಿ ಗ್ರಾಮದ 8ನೇ ವಾರ್ಡ್ ಗೂಡಿಂಜ ನಿವಾಸಿ ಸುಮೇಶ್ ಆಚಾರ್ಯ ಮತ್ತು ಮೂಲೆ ಬಡ್ಡಡ್ಕ ನಿವಾಸಿ ರಾಘವೇಂದ್ರ ರವರ 94ಸಿ ಅರ್ಜಿಯು ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದು, ಇದರ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಸತ್ಯಕುಮಾರ್ ಆಡಿಂಜರವರು ಮುತುವರ್ಜಿ ವಹಿಸಿ ಕೆಲವೇ ದಿನಗಳಲ್ಲಿ ಹಕ್ಕು ಪತ್ರ ವಿತರಿಸಲು ಪ್ರಯತ್ನಿಸಿದ್ದರು.
ಕಳೆದ ಸೋಮವಾರ ಸುಳ್ಯ ತಹಶೀಲ್ದಾರ್ ಮಂಜುನಾಥ್ ರವರು ಪಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಸತ್ಯಕುಮಾರ್ ಆಡಿಂಜರವರು ಉಪಸ್ಥಿತರಿದ್ದರು.