ಕೇರ್ಪಡ ಕೂಡುಕಟ್ಟಿನ ಬಿರ್ಮೆರ್ ಉಳ್ಳಾಕುಲು ,ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಕೇರ್ಪಡ ಕೂಡುಕಟ್ಟಿನ ಉಳ್ಳಾಕುಲು, ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.ಫೆ.೮ ರಂದು ಬೊಳ್ಕಜೆ ಸ್ಥಾನ ಚಾವಡಿಯಲ್ಲಿ ಸೋಣ ನಡಾವಳಿ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಫೆ.೯ ರಂದು ಬೊಳ್ಕಜೆ ಸ್ಥಾನದಿಂದ ಭಂಡಾರ ತೆಗೆದು ದೇವರ ಮಜಲಿಗೆ ಸಾಗಿ ದೊಂಪದ ಬಲಿ ನಡೆದು . ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
೧೦ರಂದು ಬೆಳಿಗ್ಗೆ ಪಂಜುರ್ಲಿ ದೈವದ ನೇಮೋತ್ಸವ ನಡೆಯಿತು.


ಬೆಳಿಗ್ಗೆ ದೇವರಮಜಲಿನಿಂದ ಮಾರಿಕಳ ಅಲೆಕ್ಕಾಡಿ ಮಾರ್ಗವಾಗಿ ಮಾದಗುಡ್ಡೆಯಲ್ಲಿ ಸಮಾಪ್ತಿಯಾಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎಂಜೀರು ಪದ್ಮನಾಭ ರೈ, ಕಾರ್ಯದರ್ಶಿ ಸಾಯಿಪ್ರಸಾದ್ ಬೊಳ್ಕಜೆ, ಖಜಾಂಜಿ ಅವಿನಾಶ್ ದೇವರಮಜಲು, ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.