ಫೆ.25 ರಿಂದ ಫೆ.28 : ಎಡಮಲೆ ಭೂಮಿ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನ

0

ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮ ನಡಾವಳಿ

ಮಿತ್ತಮೂಲೆ ಎಡಮಲೆ ಕುಟುಂಬದ ಎಡಮಲೆ ಭೂಮಿ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮ ನಡಾವಳಿಯು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.25 ರಿಂದ ಫೆ.28 ರವರೆಗೆ ವಿವಿಧ ಧಾರ್ಮಿಕ ಮತ್ತು ದೈವಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ.25 ರಂದು ಸಂಜೆ ,6.30 ರಿಂದ ದೇವತಾ ಪ್ರಾರ್ಥನೆ,ಆಚಾರ್ಯವರಣೆ,ಸ್ವಸ್ತಿ ಪುಣ್ಯಾಹ ವಾಚನ,ಸ್ಥಳಶುದ್ಧಿ,ಪ್ರಾಸಾದ ಶುದ್ದಿ,ರಕ್ಷೋಘ್ನ ಹೋಮ,ವಾಸ್ತುಹೋಮ,ವಾಸ್ತುಪೂಜಾಬಲಿ,ನೂತನ ಬಿಂಬ ಜಲಾಧಿವಾಸ,ಪ್ರಾಕಾರ ದಿಕ್ಬಲಿ,ಪ್ರಸಾದ ವಿತರಣೆ ನಡೆಯಲಿದೆ.
ಫೆ.26 ರಂದು ಪ್ರಾತ:ಕಾಲ 6.00 ರಿಂದ ಮಹಾಗಣಪತಿ ಹೋಮ,ಪಂಚವಿಂಶತಿ ಕಲಶಪೂಜೆ ನಡೆಯಲಿದೆ.
ಬೆಳಿಗ್ಗೆ ಗಂಟೆ 7.48 ಕ್ಕೆ ಧರ್ಮದೈವ ರುದ್ರಚಾಮುಂಡಿ,ಶಿರಾಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ನಡೆಯಲಿದೆ.
ಸಾನ್ನಿಧ್ಯ ಕಲಶಾಭಿಷೇಕ,ತಂಬಿಲ ಸೇವೆ,ಮಂಗಳಾರತಿ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.
ಫೆ.27 ರಂದು ಸಂಜೆ 4.00 ರಿಂದ ಭಂಡಾರ ತೆಗೆದು ಬಿರ್ಮೆರ್ ,ಸತ್ಯಜಾವತೆ,ಕಲ್ಲುರ್ಟಿ ದೈವಗಳಿಗೆ ನೇಮ ನಡೆಯಲಿದೆ.
ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಬಳಿಕ ಕುಕ್ಕೆತ್ತಿಬಲ್ಲು,ವರ್ಣಾರ ಪಂಜುರ್ಲಿ,ಕುಪ್ಪೆಪಂಜುರ್ಲಿ,ಜಾಲ ಕೊರತ್ತಿ,ಪಿಲಿಭೂತ ನೇಮ ನಡೆಯಲಿದೆ.
ಫೆ.28 ರಂದು ಬೆಳಿಗ್ಗೆ ಗಂಟೆ 6.00 ರಿಂದ ರುದ್ರಚಾಮುಂಡಿ,ಶಿರಾಡಿ ದೈವಗಳ ನೇಮ ನಂತರ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ‌
ನಂತರ ಗುಳಿಗ,ಅಂಗಾರಬಾಕುಡ ದೈವಗಳಿಗೆ ನೇಮ ನಡೆಯಲಿದೆ.