p>

ನೆಲ್ಲೂರು ಕೆಮ್ರಾಜೆ : ಕಾರ್ಮಿಕ ಹೃದಯಾಘಾತದಿಂದ ನಿಧನ

0

ಕಾರ್ಮಿಕ ರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಬಾಳೆಗುಂಡಿ ಎಂಬಲ್ಲಿಂದ ನಿನ್ನೆ (ಫೆ.21) ವರದಿಯಾಗಿದೆ.

ಬಂಟ್ವಾಳ ತಾಲೂಕಿನ ಅಡ್ಯನಡ್ಕ ಬಳಿಯ ಅಮೈ ದಿ| ಕುಂಞಿರಾಮ ಮಣಿಯಾಣಿ ಎಂಬವರ ಪುತ್ರ ಗೋಪಾಲ ಎಂಬವರು ಕಳೆದ 8 ತಿಂಗಳಿನಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ಬಾಳೆಗುಂಡಿಯಲ್ಲಿ ವಿ.ವಿ.ಬಾಲನ್ ಎಂಬವರ ಜಾಗದಲ್ಲಿ ಕೆಲಸ ಮಾಡುತ್ತಿದ್ದರು.

ಕಳೆದೆರಡು ದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ನಿನ್ನೆ ಎಲಿಮಲೆಯ ವೈದ್ಯರಲ್ಲಿಗೆ ತೆರಳಿದ್ದರು. ಅವರ ಸೂಚನೆ ಸುಳ್ಯದ ಆಸ್ಪತ್ರೆಯಲ್ಲಿ ದಾಖಲಾದರು. ಅದರೆ ಅಲ್ಲಿ ನೀಡಿದ ಚಿಕಿತ್ಸೆಗೆ ಅವರು ಸ್ಪಂಧಿಸದೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಅವಿವಾಹಿತರಾಗಿರುವ ಇವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.