ಮಾ.3 -4: ಸೋಣಂಗೇರಿಯಲ್ಲಿ 30ನೇ ವರ್ಷದ ಅರ್ಧ ಏಕಾಹ ಭಜನೆ

0

ಸಾರ್ವಜನಿಕ ಸತ್ಯನಾರಾಯಣ ಪೂಜೆ – ಮಕ್ಕಳ ಯಕ್ಷಗಾನ ಪ್ರದರ್ಶನ

ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರದಲ್ಲಿ 30ನೇ ವರ್ಷದ ಅರ್ಧ ಏಕಾಹ ಭಜನೆ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಕ್ಕಳ ಯಕ್ಷಗಾನ ಪ್ರದರ್ಶನವು ಮಾ.3 ಮತ್ತು 4ರಂದು ಜರುಗಲಿದೆ.

ಮಾ.3ರಂದು ಬೆಳಿಗ್ಗೆ ಗಣಹೋಮ, ಬಳಿಕ ಸಾರ್ವಜನಿಕ ಶ್ರೀಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.

ಅಪರಾಹ್ನ ಭಜನಾ ಮಂದಿರದಿಂದ ಸೋಣಂಗೇರಿ ಸರ್ಕಲ್ ತನಕ ಕುಣಿತ ಭಜನಾ ಮೆರವಣಿಗೆಯು ಸಾಗಿ ಬರಲಿದ್ದು, ಸಂಜೆ ಸೋಣಂಗೇರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಬಾಲಕೃಷ್ಣ ನಾಯರ್ ನೀರಬಿದಿರೆ ನಿರ್ದೇಶನದ ಶ್ರೀ ದುಗ್ಗಲಾಯ ಮಕ್ಕಳ ಯಕ್ಷ ಕಲಾ ಸಂಘದ ವತಿಯಿಂದ “ಶ್ರೀಕೃಷ್ಣಲೀಲೆ ಕಂಸವಧೆ” ಯಕ್ಷಗಾನ ನಡೆಯಲಿದೆ.
ಮಾ.4ರಂದು ಸೂರ್ಯೋದಯಕ್ಕೆ ದೀಪ ಪ್ರತಿಷ್ಠೆಯಾಗಿ ಅರ್ಧ ಏಕಾಹ ಭಜನೆಯು ಪ್ರಾರಂಭಗೊಳ್ಳಲಿದ್ದು, ಸಂಜೆ ದೀಪ ವಿಸರ್ಜನೆಯೊಂದಿಗೆ ಸಂಪನ್ನಗೊಳ್ಳಲಿದೆ.