ದಿ. ಶ್ರೀಮತಿ ಜಯಂತಿ ಪರಮಲೆಯವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ

0

ಇತ್ತೀಚೆಗೆ ನಿಧನರಾದ ದಿ. ಜಯಂತಿ ಪರಮಲೆಯವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಮಾ. 6 ರಂದು ನಡೆಯಿತು.

ಮೃತರ ಬಗ್ಗೆ ಪರಶುರಾಮ ಚಿಲ್ತಡ್ಕರವರು ಮಾತನಾಡಿ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಿ. ಜಯಂತಿ ಪರಮಲೆಯವರ ಪತಿ ಹೂವಯ್ಯ ಗೌಡ, ಮಗ ಗಗನ್ ಪರಮಲೆ, ಅಳಿಯ ಮೋಹಿತ್ ಕಾಳಮ್ಮನೆ, ಬಂಧುಗಳು, ಹಿತೈಷಿಗಳು ನೆಂಟರಿಷ್ಟರು, ಕುಟುಂಬಸ್ಥರು ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಹೂ ಹಾಕಿ ಶ್ರದ್ಧಾಂಜಲಿ ಅರ್ಪಿಸಿದರು.