“ಸುವರ್ಣ ಭಾರತ್ ” ಸಾಕ್ಷ್ಯ ಚಿತ್ರ ಬಿಡುಗಡೆ

0

ಭಾರತ್ ಆಗ್ರೋ ಸುವರ್ಣ ವರ್ಷಾಚರಣೆಯ ಡಾಕ್ಯುಮೆಂಟರಿ

ಸುಳ್ಯದ ಭಾರತ್ ಆಗ್ರೋ ಸರ್ವಿಸ್ ಮತ್ತು ಸಪ್ಲೈಸ್ ಸಂಸ್ಥೆಯ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸುದ್ದಿ ಮೀಡಿಯಾ ಕ್ರಿಯೇಶನ್ಸ್ ತಯಾರಿಸಿದ ಸುವರ್ಣ ಭಾರತ್ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು.

ಭಾರತ್ ಆಗ್ರೋ ಸಂಸ್ಥೆ ಮತ್ತು ಮಾಲಕ ರಾಮಚಂದ್ರ ಪೆರಿಯಡ್ಕ ಅವರು ಸಾಗಿ ಬಂದ ಹಾದಿ, ಕೃಷಿ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿ, ಅವರ ಸಹವರ್ತಿಗಳ ಅನಿಸಿಕೆಗಳನ್ನೊಳಗೊಂಡ ಈ ಡಾಕ್ಯುಮೆಂಟರಿಯನ್ನು ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಸಾಹಿತ್ಯ ರಚಿಸಿ ನಿರ್ದೇಶಿಸಿದ್ದು, ಯತೀಶ್ ಕದ್ರ ಸಂಕಲನ ನಿರ್ವಹಿಸಿದ್ದಾರೆ. ಧನುಷ್ ಪುತ್ತೂರು ಕ್ಯಾಮರಾ ಚಿತ್ರೀಕರಣ ನಡೆಸಿದ್ದು, ಬೇಬಿ ವಿದ್ಯಾ ಪಿ.ಬಿ. ಹಿನ್ನೆಲೆ ಧ್ವನಿ ನೀಡಿದ್ದಾರೆ.