ಅರಂತೋಡು: ಕಾರು -ಸ್ಕೂಟಿ ಅಪಘಾತ

0

ಸ್ಕೂಟಿ ಸವಾರ ಸೇರಿ ಮೂವರಿಗೆ ಗಾಯ

ಕಾರು ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ, ಸ್ಕೂಟಿ ಸವಾರ ಗಾಯಗೊಂಡ ಘಟನೆ ಅರಂತೋಡು ಗ್ರಾಮದ ಎಳ್ಪಕಜೆ ಎಂಬಲ್ಲಿ ಮಾ.9ರಂದು ಅಪರಾಹ್ನ ಸಂಭವಿಸಿದೆ.

ಮೈಸೂರು ಮೂಲದ ವ್ಯಕ್ತಿಯೋರ್ವರು ಸ್ಕೂಟಿಯಲ್ಲಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಗೂನಡ್ಕ ಕೊರಗಜ್ಜ ದೈವಸ್ಥಾಮಕ್ಕೆ ಭಜನಾ ಕಾರ್ಯಕ್ರಮಕ್ಕೆ ಬಂದು ಹಿಂತಿರುಗುತ್ತಿದ್ದ ಕನಕಮಜಲಿನ ಶರತ್ ಮಳಿ ಎಂಬವರು ಚಲಾಯಿಸುತ್ತಿದ್ದ ಮಾರುತಿ ಕಾರಿಗೆ ಢಿಕ್ಕಿ ಹೊಡೆದಿದ್ದು, ಸ್ಕೂಟಿ ಸವಾರ ಹಾಗೂ ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.