ಕೇರ್ಪಳ ಪಯಸ್ವಿನಿ ಯುವಕ ಮಂಡಲದಿಂದ ಸ್ವಚ್ಚತಾ ಅಭಿಯಾನ

0

ಸುಳ್ಯದ ಕೇರ್ಪಳ‌ ಯುವಕ ಮಂಡಲ ಇದರ ಆಶ್ರಯದಲ್ಲಿ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್, ಸಮಾಜಕಲ್ಯಾಣ ವಿದ್ಯಾರ್ಥಿನಿಯರ ಹಾಸ್ಟೆಲ್ ಇದರ ಸಹಯೋಗದಲ್ಲಿ ಸುಳ್ಯ ಕೋರ್ಟ್‌ ರಸ್ತೆ ಹಾಗೂ ಕುರುಂಜಿಗುಡ್ಡೆ ರಸ್ತೆ ಬದಿಯಲ್ಲಿ ಸ್ವಚ್ಚತಾ ಅಭಿಯಾನ ಮಾ.10ರಂದು‌ ನಡೆಯಿತು.

ಸುಳ್ಯ ‌ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯೆ ಪೂಜಿತಾ ಕೆ.ಯು., ಸುಳ್ಯ ಸಿ.ಎ.ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ದಯಾನಂದ ಕೇರ್ಪಳ, ಸಮಾಜಕಲ್ಯಾಣ ಇಲಾಖಾ ವಾರ್ಡನ್ ಕಾವ್ಯಶ್ರೀ, ಬಿಸಿಎಂ ವಾರ್ಡನ್ ಸದ್ಧಾಂ ಮೊದಲಾದವರು ಇದ್ದರು.

ಕೇರ್ಪಳ. ಪಯಸ್ವಿನಿ ಯುವಕ ಮಂಡಲದ ಸದಸ್ಯರು, ಸಮಾಜಕಲ್ಯಾಣ, ಹಾಗೂ ಬಿಸಿಎಂ ವಿದ್ಯಾರ್ಥಿಗಳು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

ಚಂದ್ರಶೇಖರ ಕೇರ್ಪಳ ವಂದಿಸಿದರು. ಶಿವಪ್ರಸಾದ್ ಕೇರ್ಪಳ ಕಾರ್ಯಕ್ರಮ ನಿರ್ವಹಿಸಿದರು.