ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೆ ಸಂಪನ್ನ

0

ಭಕ್ತಿ ಪ್ರಧಾನವಾಗಿ ನಡೆದ ದೈವಗಳ ನೇಮೋತ್ಸವ

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವ ನಿನ್ನೆ ಆರಂಭಗೊಂಡು ಇಂದು ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.

ಬೆಳಿಗ್ಗೆ ರಾಜ್ಯದೈವ ನೇಮ, ರುದ್ರಚಾಮುಂಡಿ ದೈವದ ನೇಮ, ಪುರುಷ ದೈವದ ನೇಮ, ಅನ್ನಸಂತರ್ಪಣೆ, ಮಧ್ಯಾಹ್ನ ದ ಬಳಿಕ ಶ್ರೀ ಪಂಜುರ್ಲಿ ದೈವ ನೇಮ ನಡೆದು, ಬಳಿಕ ಧ್ವಜಾವರೋಹಣ ನಡೆಯಿತು. ‌

ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀ ದೈವಗಳ ದರ್ಶನ ಪಡೆದರು.