ಪಂಜ’: ಪೈಂದೋಡಿ ದೇವಳದಲ್ಲಿ ಕ್ಷೇತ್ರದ ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ

0

ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದಲ್ಲಿ ಜಗದೀಶ್ ಆಚಾರ್ಯ ಪುತ್ತೂರು ರವರ ಸಂಗೀತ ನಿರ್ದೇಶನ ಮತ್ತು ಗಾಯನ ಶ್ರೀ ಕ್ಷೇತ್ರದ ಸ್ವಾಮೀ ಶ್ರೀ ಸುಬ್ರಾಯ ಪೈಂದೋಡಿ ಕ್ಷೇತ್ರ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ ಮಾ.16ರಂದು ಜರುಗಿತು.

ದೇವಳದ ಪ್ರಧಾನ ಅರ್ಚಕ ವಿಷ್ಣು ಪೈಂದೋಡಿ ಮತ್ತು
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಬಿಡುಗಡೆ ಗೊಳಿಸಿದರು.

ಇದೇ ವೇಳೆ ಭಕ್ತಿ ಗೀತೆಯ ಗಾಯಕ ಜಗದೀಶ್ ಆಚಾರ್ಯ ಪುತ್ತೂರು, ಸಾಹಿತಿ ರಕ್ಷಿತ್ ಮಂಚಿಕಟ್ಟೆ , ನಿರ್ಮಾಪಕ
ಚೇತನ್ ಪಂಜ ರವರನ್ನು ಗೌರವಿಸಲಾಯಿತು.

ಭಕ್ತಿಗೀತೆಯಲ್ಲಿ ಛಾಯಾ ಗ್ರಾಹಕರಾಗಿ ಅರುಣ್ ರೈ ಪುತ್ತೂರು , ಸಂಕಲನದಲ್ಲಿ ಚರಣ್ ಆಚಾರ್ಯ ಪುತ್ತೂರು, ದೇವಳದ ಪ್ರಧಾನ ಅರ್ಚಕ ವಿಷ್ಣು ಪೈಂದೋಡಿ, ಶಿಶಿರ್ ರೈ ಚೆಲ್ಯಡ್ಕ ಸಹಕರಿಸಿದ್ದರು.

ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಭವಾನಿ ಶಂಕರ ಪಾಲೋಳಿ , ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಬರೆಮೇಲು, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಲಿಗೋಧರ ಆಚಾರ್ಯ, ಚಿನ್ನಪ್ಪ ಚೊಟ್ಟೆಮಜಲು, ನವೀನ್ ಮಾವಂಜಿ ಹಾಗೂ
ಭಕ್ತಾದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲೋಕೇಶ್ ಬರೆಮೇಲು ಸ್ವಾಗತಿಸಿದರು ಮತ್ತು ವಂದಿಸಿದರು.