ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಶರೀಫ್ ಭಾರತ್ ಬಾಳಿಲ ಆಯ್ಕೆ

0

ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಶರೀಫ್ ಭಾರತ್ ಬಾಳಿಲ ಇವರು ಆಯ್ಕೆಯಾಗಿದ್ದಾರೆ. ಇವರು ಬಾಳಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ , ಸಾಮಾಜಿಕ ಮತ್ತು ಮಾಹಿತಿಹಕ್ಕು ಹೋರಾಟಗಾರರಾಗಿ,ಮೊಹಿಯುದ್ದೀನ್ ಜುಮ್ಮಾ ಮಸೀದಿ ಅತ್ತಿಕರಮಜಲ್ ಇದರ ಉಪಾಧ್ಯಕ್ಷರಾಗಿ, ಮಿನ್ನಾತುಲ್ ಹುದಾ ಯಂಗ್ ಗೈಸ್ ಅತ್ತಿಕರಮಜಲ್ ಇದರ ಅಧ್ಯಕ್ಷರಾಗಿ, SKSSF ಸುಳ್ಯ ವಲಯ ಇದರ ಪ್ರಧಾನ ಕಾರ್ಯದರ್ಶಿಯಾಗಿ,ಜೈ ಭಾರತ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೆಳ್ಳಾರೆ ಇದರ ಗೌರವಾಧ್ಯಕ್ಷರಾಗಿ, ಆದರ್ಶ ಕ್ರೀಡಾ ಸಂಘ ಬಾಳಿಲ ಇದರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.