ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರಿ ಸಂಘ ಸಂಘದ ಶತಮಾನೋತ್ಸವ ಪ್ರಯುಕ್ತ

0

ಕ್ರೀಡಾಕೂಟ ಉದ್ಘಾಟನೆ

ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರಿ ಸಂಘ ಇದರ ಸಂಘದ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಕ್ರೀಡಾಕೂಟದ ಮಾ 16ರಂದು ಬಾಳುಗೋಡು ಬೆಟ್ಟುಮಕ್ಕಿ ಕೂಜುಗೋಡು ಕಟ್ಟೆಮನೆ ತಮ್ಮಯ್ಯ ಗೌಡ ಕ್ರೀಡಾಂಗಣದ ಕಟ್ಟೆಮನೆ ಗಿರಿಯಪ್ಪ ಗೌಡ ಬಯಲು ರಂಗ ಮಂದಿರ ವೇದಿಕೆಯಲ್ಲಿ ನಡೆಯಿತು.

ನಿವೃತ್ತ ಮುಖ್ಯಗುರುಗಳಾದ ಪದ್ಮಯ್ಯ ಗೌಡ ಕಟ್ಟೆಮನೆರವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವೈದ್ಯರು, ಶ್ರೀ ಹರಿಹರೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಡಾ. ಚಂದ್ರಶೇಖರ ಕಿರಿಭಾಗ ನೆರವೇರಿಸಿದರು.

ಶತಮಾನೋತ್ಸವದ ಸಮಿತಿಯ ಅದ್ಯಕ್ಷರಾದ ರಾಮಚಂದ್ರ ಪಳಂಗಾಯ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ, ಕೊಲ್ಲಮೊಗ್ರ ಗ್ರಾ.ಪಂ ಅದ್ಯಕ್ಷೆ ಜಯಶ್ರೀ ಚಾಂತಳ, ಶತಮಾನೋತ್ಸವದ ಸ್ಮರಣಸಂಚಿಕೆ ಸಮಿತಿಯ ಪ್ರಧಾನ ಸಂಪಾದಕರಾದ ಪ್ರಭಾಕರ ಕಿರಿಭಾಗ, ನಾರಾಯಣಯ್ಯ ಕಟ್ಟ, ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರಿ ಸಂಘದ ಮಾಜಿ ಅಧ್ಯಕ್ಷರಾದ ಬಿ.ಆರ್ ಉಮೇಶ್ ಬಿಳಿಮಲೆ, ಬೆಟ್ಟುಮಕ್ಕಿ ದೈವಸ್ಥಾನದ ಆಡಳಿತ ಮೊಕ್ತೇಸರಾದ ವಸಂತ ಕಿರಿಭಾಗ, ಕ್ರೀಡಾ ಸಂಯೋಜಕ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ ಕಡ್ಲಾರ್, ಸೊಸೈಟಿ ಉಪಾಧ್ಯಕ್ಷರಾದ ಶೇಖರ ಅಂಬೆಕಲ್ಲು, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾದ ದಯಾನಂದ ಕಟ್ಟೆಮನೆ, ಜಯಂತ ಬಾಳುಗೋಡು, ಶೇಷಪ್ಪ ಗೌಡ ಕಿರಿಭಾಗ, ದಯಾನಂದ ಪರಮಲೆ, ಪ್ರೀಯಾ ಕಲ್ಲೇಮಠ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾ .16 ಹಾಗು17 ರಂದು ಸಂಘದ ಕಾರ್ಯವ್ಯಾಪ್ತಿಯ ಸದಸ್ಯರು, ನವೋದಯ ಸ್ವ ಸಹಾಯ ಸಂಘದ ಸದಸ್ಯರು, ಆಡಳಿತ ಮಂಡಳಿ ಹಾಗು ಸಿಬ್ಬಂದಿಗಳಿಗೆ ವಿವಿದ ಕ್ರೀಡಾಕೂಟ ನೆರವೇರಲಿದೆ.
ಕುಮಾರಿ ಸುಶ್ಮಿತ ಹರಿಹರ ಪ್ರಾರ್ಥಿಸಿ, ಅನಂತರಾಮ ಮಣಿಯಾನ ಸ್ವಾಗತಿಸಿದರು, ಶೇಖರ ಅಂಬೆಕಲ್ಲು ದನ್ಯವಾದಗೈದರು. ನಿತ್ಯಾನಂದ ಬೀಮಗುಳಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಕುಶಾಲಪ್ಪ ಕಾಂತುಕುಮೇರಿ