ಏ. 7-8: ಅಜಪಿಲ ಒತ್ತೆಕೋಲ, ಆಮಂತ್ರಣ ಪತ್ರ ಬಿಡುಗಡೆ

0

ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಬೆಳ್ಳಾರೆಯಲ್ಲಿ ಏಪ್ರಿಲ್ 7 ಮತ್ತು 8ರಂದು ನಡೆಯಲಿರುವ ಶ್ರೀ ಮಹಾ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಆಮಂತ್ರಣ ಪತ್ರ ಬಿಡುಗಡೆ ಮಾ. 17 ರಂದು ನಡೆಯಿತು.

ಈ ಸಂದರ್ಭದಲ್ಲಿ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಚೀಮುಳ್ಳು, ಗೌರವಾಧ್ಯಕ್ಷ ಆನಂದ ರೈ ಪುಡ್ಕಜೆ, ಕಾರ್ಯದರ್ಶಿ ಪದ್ಮನಾಭ ಚೂಂತಾರು, ಕೋಶಾಧಿಕಾರಿ ಆನಂದ ಗೌಡ ಪಡ್ಪು, ಪೂರ್ವಧ್ಯಕ್ಷರಾದ ಕೊರಗಪ್ಪ ಕುರಂಬುಡೇಲು, ಸಂಜಯ್ ನೆಟ್ಟಾರು, ಸತೀಶ್ ಕಿಲಂಗೋಡಿ, ರಾಮ ಪಾಟಾಳಿ ಮೂಡೈತೋಟ, ತೀರ್ಥರಾಮ ಗುಡ್ಡೆಮನೆ, ಗಂಗಾಧರ ಪರ್ತಿಕೆರೆ,ಕಿರಣ್ ಪರ್ತಿಕೆರೆ, ಅಂಕಿತ್ ಪಡ್ಪು ಸೇರಿದಂತೆ ಸಮಿತಿಯ ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.