ಬೆಳ್ಳಾರೆ ಒಡಿಯೂರು ಘಟಸಮಿತಿ ಸಭೆ ತುಳು ಸಮ್ಮೇಳನ ನಡೆಸುವ ವಿಚಾರ ವಿಮರ್ಶೆ

0

ಬೆಳ್ಳಾರೆ ಕೆಪಿಎಸ್ ನಲ್ಲಿ ಒಡಿಯೂರು ಘಟಸಮಿತಿ ಸಭೆಯು ಮಾ.17 ರಂದು ನಡೆಯಿತು. ಯೋಜನೆ ನಿದೇರ್ಶಕರಾದ ಕಿರಣ್ ಉರ್ವ ಉಪಸ್ಥಿತರಿದ್ದು ಬೆಳ್ಳಾರೆಯ ಘಟಸಮಿತಿಯ ಅಶಯದಲ್ಲಿ ಸುಳ್ಯ ತಾಲೂಕು ತುಳು ಸಮ್ಮೇಳನ ನಡೆಸುವ ಪ್ರಸ್ತಾಪ ಚರ್ಚಿಸಿ ಸಮಿತಿಯ ಸದಸ್ಯರು ಮುಂದಿನ ಸಭೆಯಲ್ಲಿ ತುಳು ಸಮ್ಮೇಳನ ನಡೆಸುವ ಬಗ್ಗೆ ಅವರವರ ಸಂಘಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲೆಂದು ನಿರ್ಧರಿಸಲಾಯಿತು.

ಸುಳ್ಯ ತಾಲೂಕಿನ ಗ್ರಾಮೋತ್ಸವ ಸಮಿತಿಯ ಸಂಚಾಲಕ ಜೆಕೆ ರೈ ಸಮ್ಮೇಳನದ ಮಾಹಿತಿಯನ್ನು ನೀಡಿದರು. ಘಟಸಮಿತಿಯ ಅಧ್ಯಕ್ಷ ಸುಹಾನ್ ಅಲೆಕ್ಕಾಡಿ ಅಧ್ಯಕ್ಷ ವಹಿಸಿದ್ದರು. ಸುಳ್ಯ ಒಡಿಯೂರು ಬ್ಯಾಂಕ್ ಮ್ಯಾನೇಜರ್ ಸಂತೋಷ್ ಶೆಟ್ಟಿ ಮೇಲ್ವೀಚಾರಿಕಿ ಗೀತಾ ಮತ್ತು ಇತರು ಉಪಸ್ಥಿತರಿದ್ದರು. ಯೋಜನೆಯ ಶೀಬಾ ಸ್ವಾಗತಿಸಿ, ಮೇಲ್ವೀಚಾರಿಕಿ ಗೀತಾ ನೆಟ್ಟಾರು ವಂದಿಸಿದರು.