ದುಗ್ಗಲಡ್ಕ ಪ್ರೌಢಶಾಲೆ ; ವಸಂತ್ ಕುಮಾರ್ ಎಂ.ಪಿ.ಯವರ ಬೀಳ್ಕೊಡುಗೆ ಸಮಾರಂಭ

0

2009 ರಿಂದ ಸರ್ಕಾರಿ ಪ್ರೌಢಶಾಲೆ ದುಗ್ಗಲಡ್ಕ ಇಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕರಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ವಸಂತ್ ಕುಮಾರ್ ಎಂ ಪಿ.ಇವರನ್ನು ಶಾಲೆಯಿಂದ ಬೀಳ್ಕೊಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಕುಮಾರ್ ಪಿ ಯವರು ವಹಿಸಿದ್ದರು. ಮಾಜಿ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಗೌಡ ಅತಿಥಿಗಳಾಗಿ ಭಾಗವಹಿಸಿ ಶುಭಾಶಯ ಕೋರಿದರು. ಶಿಕ್ಷಕರಾದ ಉದಯ್ ಕುಮಾರ್ ವೈ ಕೆ ಸ್ವಾಗತಿಸಿದರು. ಸುನಿಲ್ ಜಿ ಪ್ರಾರ್ಥಿಸಿದರು. ವೆಂಕಟ್ರಮಣ ಕೆ. ಎಸ್. ಅಭಿನಂದನಾ ಭಾಷಣ ಮಾಡಿದರು.

ಶೋಭಾ ಎ ಎನ್ ಅನಿಸಿಕೆ ವ್ಯಕ್ತಪಡಿಸಿ, ವಂದಿಸಿದರು.ವಿದ್ಯಾರ್ಥಿಗಳಾದ ತೇಜಸ್ವಿನಿ ಎನ್ ಮತ್ತು ಶ್ರೇಯಾ ಕೆ ಪಿ ಅನಿಸಿಕೆ ವ್ಯಕ್ತಪಡಿಸಿ ಶುಭಾಶಯ ಸಲ್ಲಿಸಿದರು. ಸನ್ಮಾನ ಸ್ವೀಕರಿಸಿದ ವಸಂತ್ ಕುಮಾರ್ ರವರು ಸೇವಾನುಭವ ಹಂಚಿಕೊಂಡು ಶಾಲೆಗೆ ದೇಣಿಗೆ ಘೋಷಿಸಿದರು. ಉಣ್ಣಿಕೃಷ್ಣ ಸಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕರು , ಅಡುಗೆ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದರು.