ಇಂದು ಮತ್ತು ನಾಳೆ ಬಾಳೆಹಿತ್ತಿಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲ

0


ಮೇಲೇರಿ ಕೂಡುವ ಕಾರ್ಯಕ್ರಮ


ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲ ಉತ್ಸವವು ಮಾ.೨೭ ಮತ್ತು ೨೮ರಂದು ಜರುಗಲಿದೆ. ಆ ಪ್ರಯುಕ್ತ ಮೇಲೇರಿ ಕೂಡುವ ಕಾರ್ಯವನ್ನು ತೀಯ ಸಮಾಜ ಬಾಂಧವರು ಮಾ. ೨೭ರಂದು ಬೆಳಿಗ್ಗೆ ನೆರವೇರಿಸಿದರು. ಬೆಳಿಗ್ಗೆ ರಕ್ತೇಶ್ವರಿ, ನಾಗ ಮತ್ತು ಗುಳಿಗ ದೈವದ ತಂಬಿಲ ನಡೆಯಿತು. ರಾತ್ರಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆದು, ಮೇಲೇರಿಗೆ ಅಗ್ನಿಸ್ಪರ್ಶ, ಅನ್ನಸಂತರ್ಪಣೆ ಜರುಗಲಿದೆ. ಬಳಿಕ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳ್ಚಾಟ – ವಿಷ್ಣುಲೀಲೆ ಜರುಗಲಿದೆ. ಮಾ.೨೮ರಂದು ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ, ಮಾರಿಕಳ, ಪ್ರಸಾದ ವಿತರಣೆ ಜರುಗಲಿದೆ.