ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದಲ್ಲಿ ಮಕ್ಕಳಿಗೆ ಉಚಿತ ಔಷಧಿ ವಿತರಣೆ

0

ಅಯ್ಯನಕಟ್ಟೆಯ ನಮ್ಮ ಆರೋಗ್ಯಧಾಮ ದಲ್ಲಿ ಮಾ.31 ರಂದು ಮಕ್ಕಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು. ಮಕ್ಕಳ ಮೂಳೆ ಸಾಂದ್ರತೆ, ಮೂಳೆಗಳ ಬೆಳವಣಿಗೆ, ಜಂತುಹುಳ ನಿರ್ಮೂಲನೆ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿರುವ ಮಾತ್ರೆಗಳಾದ ವಿಟಮಿನ್ ಡಿ, ಜಂತುಹುಳ ನಿಮ್ಮೂಲನೆಯ ಮಾತ್ರೆಗಳನ್ನು ವಿತರಿಸಲಾಯಿತು.

ಸುಮಾರು 30 ಕ್ಕೂ ಅಧಿಕ ಮಕ್ಕಳು ಇದರ ಸದುಪಯೋಗ ಪಡೆದರು. ಮೂಳೆ ತಜ್ಞ ಡಾ. ಶ್ರೇಯಸ್ ದೊಡ್ಡಿಹಿತ್ಲು ಮೂಳೆಯ ಆರೋಗ್ಯದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಶಸ್ತ್ರ ಚಿಕಿತ್ಸಾ ತಜ್ಞ ಡಾ.ಕಿಶನ್ ರಾವ್ ಬಾಳಿಲ ಉಪಸ್ಥಿತರಿದ್ದರು.