ಚೊಕ್ಕಾಡಿ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಸಮಾವೇಶ

0

ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಪದಾಧಿಕಾರಿಗಳ, ಸಮಿತಿ ಸಂಚಾಲಕರ ಹಾಗೂ ಯುವ ಸಮಾವೇಶ ಮತ್ತು ಸೇವಾದಳ ತರಬೇತಿ ಕಾರ್ಯಕ್ರಮ ಎ. 6 ಮತ್ತು 7ರಂದು ನಡೆಯಿತು.
ಸಮಿತಿಯ ರಾಜ್ಯಾಧ್ಯಕ್ಷರಾದ ಪದ್ಮನಾಭ ಪೈ ಧ್ವಜಾರೋಹಣಗೈದು ಸಮಾವೇಶವನ್ನು ಉದ್ಘಾಟಿಸಿ ರಾಷ್ಟ್ರೀಯ ಉಪಕ್ರಮ( National initiatives) ಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ರಾಜ್ಯ ಮಹಿಳಾ ಸೇವಾ ಸಂಯೋಜಕಿ ಶ್ರೀಮತಿ ಪ್ರಿಯಾ ಪಿ ಪೈಯವರು ಮಹಿಳಾ ಸೇವಾದಳ ಸದಸ್ಯರಿಗೆ ಸಾಯಿಸೇವಾ ಮಾಹಿತಿ ನೀಡಿದರು.
ರಾಜ್ಯ ಯುವ ಸಂಯೋಜಕರಾದ ವೆಂಕಟೇಶ ಬಡಿಗೇರ, ರಾಜ್ಯ ವೇದ ಸಂಯೋಜಕ ದಿನೇಶ್, ರಾಜ್ಯ ಯುವ ಪದಾಧಿಕಾರಿ ತಿಮ್ಮಯ್ಯ, ರಾಜ್ಯ ಆಸ್ಪತ್ರೆ ಸೇವಾ ಸಂಯೋಜಕ ಚಂದ್ರಶೇಖರ ನಾಯಕ್ ಹಾಗೂ ರಾಜ್ಯ ಪಿ.ಎಸ್. ಸಂಯೋಜಕ ನಿರಂಜನ ಹೆಬ್ಬಾರ್ ತಮ್ಮ ತಮ್ಮ ವಿಭಾಗದ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಕೆ.ಯನ್ ಪರಮೇಶ್ವರಯ್ಯ ಮತ್ತು ವಿಶ್ವೇಶ್ವರ ಆಚಾರ್ಯ ತಮ್ಮ ಅನುಭವವನ್ನು ಹಂಚಿಕೊಂಡರು. ಜಿಲ್ಲಾ ಸಂಯೋಜಕರಾದ ಶ್ರೀಮತಿ ಮೂಕಾಂಬಿಕಾ ರಾವ್, ಮುಕ್ತಾ ಕಿಣಿ, ಶಾಂತಿ ಭಟ್ ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷರಾದ ಪ್ರಸನ್ನ ಯನ್ ಭಟ್ ಸ್ವಾಗತಿಸಿ, ಚೊಕ್ಕಾಡಿ ಸಮಿತಿ ಸಂಚಾಲಕ ತೇಜಪ್ರಕಾಶ್ ವಂದಿಸಿದರು. ಲಕ್ಷ್ಮೀ ನಾರಾಯಣ ಕೋಟೆ ಸಮಾರೋಪ ಭಾಷಣ ಮಾಡಿದರು. ಉಮೇಶ್ ಹೂಳಿ ಮತ್ತು ಸಾಯಿಶೇಖರ್ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶದಲ್ಲಿ 85 ಪುರುಷರು 75 ಮಹಿಳೆಯರು ಹಾಗೂ 90 ವಿದ್ಯಾರ್ಥಿಗಳು ಭಾಗವಹಿಸಿದರು.