ಜೆಡಿಎಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

0

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಎ.14 ರಂದು ಆಚರಿಸಲಾಯಿತು.

ಜೆಡಿಎಸ್ ಪರಿಶಿಷ್ಟ ಜಾತಿ ವರ್ಗಗಳ ಘಟಕದ ಅಧ್ಯಕ್ಷ ಎನ್.ಬಿ.ಚೋಮರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಜೆಡಿಎಸ್ ವಿದ್ಯಾರ್ಥಿ ಘಟಕದ ನಾಯಕ ನಿಹಾಲ್ ಎಸ್.ಕೋಡ್ತುಗುಳಿಯವರ ನಾಯಕತ್ವದಲ್ಲಿ ಕೆಲವು ಯುವಕರು ಪಕ್ಷಕ್ಕೆ ಸೇರ್ಪಡೆಯಾದರು.
ಜೆಡಿಎಸ್ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಸಭಾಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರು, ತಾಲೂಕು ಪ್ರಧಾನ ಕಾರ್ಯದರ್ಶಿ ರಾಕೇಶ ಕುಂಟಿಕಾನ ಮತ್ತು ಉಪಾಧ್ಯಕ್ಷ ರೋಹನ್ ಪೀಟರ್, ದೇವರಾಮ ಬಾಳೆಕಜೆ, ಹಸೈನಾರ್, ರಾಮಚಂದ್ರ ಬಳ್ಳಡ್ಕ ಮತ್ತು ಜೆಡಿಎಸ್ ಹಿರಿಯ ಮುಖಂಡರುಗಳು ಪಕ್ಷಕ್ಕೆ ಸೇರ್ಪಡೆಯಾದವರಿಗೆ ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು.

ಪ್ರಣಾಮ್ ಸಿ.ಬಿ., ಶ್ರೇಯಸ್ ಕುಕ್ಕುಜೆ, ಸಾಯಿ ಸ್ಮರಣ್ ಬುಡ್ಲೆ,
ಲಿಖಿತ್ ಕುಕ್ಕುಡೇಲು, ಸಾಗರ್ ಸುಳ್ಯ, ತೇಜಸ್ ಅಡ್ಪಂಗಾಯ, ಪ್ರೀತಮ್ ಗೌಡ, ಅಂಜನ್ ಮೂರ್ಜೆ, ಕೌಶಿಕ್ ರಾಮಕೃಷ್ಣ ಪಕ್ಷಕ್ಕೆ ಸೇರ್ಪಡೆಯಾದರು.