ಮೊಗ್ರ : ಕುಣಿತ ಭಜನಾ ತರಬೇತಿ ಶಿಬಿರ ಸಮಾರೋಪ

0


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಇದರ ಗುತ್ತಿಗಾರು ವಲಯ, ಕಮಿಲ, ಮೊಗ್ರ, ಬಳ್ಳಕ್ಕ ಒಕ್ಕೂಟ ಇವರ ಸಹಯೋಗದಲ್ಲಿ ಶ್ರೀ ಕನ್ನಡದೇವತೆ ಯಾನೆ ಪುರುಷ ದೈವಸ್ಥಾನ ಮೊಗ್ರ ಇಲ್ಲಿ ನಡೆದ ಕುಣಿತ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಎ. ೨೫ರಂದು ನಡೆಯಿತು. ಸಮಾರಂಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಕಾರ್ಯನಿರ್ವಾಹಕ ಮೊಕ್ತೇಸರ ಉಮೇಶ್ ಮಕ್ಕಿ, ಗ್ರಾ.ಪಂ. ಸದಸ್ಯೆ ಶಾರದಾ ಮುತ್ಲಾಜೆ, ಬಾಲಕೃಷ್ಣ, ವೆಂಕಟ್ ಹುಲಿಕೆರೆ, ಮಧುಕರ, ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತರಬೇತುದಾರ ರಮೇಶ್ ಮೆಟ್ಟಿನಡ್ಕ ಹಾಗೂ ಸಹಕಾರ ನೀಡಿದ ಉಜಿತ್ ಶ್ಯಾಂ ಚಿಕ್ಮುಳಿ ಇವರನ್ನು ಸನ್ಮಾನಿಸಲಾಯಿತು.